ನಮ್ಮ ಮನಸ್ಸುಗಳಲ್ಲಿ ನೆನಪುಗಳುಂಟು. ಕೆಲವು ಇತ್ತೀಚಿನವು, ಕೆಲವು ಹಳೆಯವು.
ಕೆಲವು ಬಹಳ ಹಳೆಯವು, ಕೆಲವು ಸುಪ್ತವಾಗಿದ್ದು
ಮತ್ತೆ ಮತ್ತೆ ಹೊರಬರುವುವು, ಮತ್ತೆ ಕೆಲವು
ಇಂದಿಗೂ ನೆನಪಿನಲ್ಲುಳಿಯದೆ ಕಳೆದುಹೋಗಿರುವುವು. ಹೀಗೆ ನೆನಪುಗಳ ಸಾಗರವೇ ನಮ್ಮ ಮನಸ್ಸಿನಲ್ಲಿ ಇದೆ. ಕಡಲಿನಲ್ಲಿ
ಮೇಲೇಳುವ ಅಲೆಗಳಂತೆ ನಮ್ಮ ಮನಸ್ಸುಗಳಲ್ಲೂ ನೆನಪಿನ ಅಲೆಗಳು ಏಳುತ್ತ ಬೀಳುತ್ತಲೇ ಇರುತ್ತವೆ.
ಇದರಿಂದ ಬಹುಶಃ ಯಾರಿಗೂ ವಿನಾಯಿತಿ
ಇಲ್ಲ.
ಯಾರೋ ತೋರಿದ ಪ್ರೀತಿ ಪ್ರೇಮ, ಯಾರೋ ನೀಡಿದ ಸವಿಯಾದ ಅನುಭವಗಳು ಮತ್ತು ಅದರಿಂದ ನಮಗಾದ ಸಂತೋಷ, ಯಾರೋ ನಮ್ಮ ಮೇಲೆ ತೋರಿದ ಕೋಪ, ದ್ವೇಷ, ಅಸೂಯೆ ಮತ್ತು ಅದರಿಂದ ನಮಗಾದ ತೊಂದರೆ, ನೋವು, ಸಂಕಟ, ಹೀಗೆ ಬೇರೆ ಬೇರೆ ಸಮಯಗಳಲ್ಲಿ ಬೇರೆ ಬೇರೆ ವ್ಯಕ್ತಿಗಳಿಂದಾದ ಸಾವಿರಾರು ಅನುಭವಗಳು ನೆನಪಿನ ರೂಪದಲ್ಲಿ ನಮ್ಮ ಮನಸ್ಸಿನ ಆಳದಲ್ಲಿ ಕುಳಿತಿರುತ್ತದೆ ಅಲ್ಲವೆ? ಕೆಲವು ನಾವು ಬೇಕೆಂದಾಗ ಮನಃಪಟಲಕ್ಕೆ ಬಂದು ಕೂರುತ್ತವೆ, ಕೆಲವು ತಮ್ಮಷ್ಟಕ್ಕೆ ತಾವೇ ಬಂದು ಕುಣಿದಾಡುತ್ತಿರುತ್ತವೆ, ಮತ್ತೆ ಕೆಲವು ನಮ್ಮ ಪ್ರಮೇಯವೇ ಇಲ್ಲದೆ ಮೇಲಕ್ಕೆ ಪುಟಿದು ನೆನಪಿನಂಗಳಕ್ಕೆ ಬಂದು ಕುಣಿದಾಡುತ್ತಾ ನಮ್ಮನ್ನು ಕಾಡುತ್ತಿರುತ್ತವೆ. ಹಾಗೆ ಅವಶ್ಯಕತೆ ಇದ್ದು ಬರುವ ನೆನಪುಗಳು ನಮಗುಪಯುಕ್ತವಾಗಿರುತ್ತವೆ. ಆದರೆ ತಮ್ಮಷ್ಟಕ್ಕೆ ತಾವೇ ಬರುವ ನೆನಪುಗಳು ಅನಾವಶ್ಯಕವಾಗಿ ನಮ್ಮ ಮನಸ್ಸಿನ ಅಂಗಳವನ್ನು ಆಕ್ರಮಿಸಿ ಮನಃಶಾಂತಿಯನ್ನು ಕದಡುತ್ತಿರುತ್ತವೆ. ಅದರಿಂದ ಮುಕ್ತಿ ಪಡೆಯಲು ನಮ್ಮ ಪುರಾತನರು ಮತ್ತು ಸನಾತನರು ನಮಗೆ ಹಲವಾರು ಮಾರ್ಗಗಳನ್ನು ತೋರಿದ್ದಾರೆ.
ಯಾರೋ ತೋರಿದ ಪ್ರೀತಿ ಪ್ರೇಮ, ಯಾರೋ ನೀಡಿದ ಸವಿಯಾದ ಅನುಭವಗಳು ಮತ್ತು ಅದರಿಂದ ನಮಗಾದ ಸಂತೋಷ, ಯಾರೋ ನಮ್ಮ ಮೇಲೆ ತೋರಿದ ಕೋಪ, ದ್ವೇಷ, ಅಸೂಯೆ ಮತ್ತು ಅದರಿಂದ ನಮಗಾದ ತೊಂದರೆ, ನೋವು, ಸಂಕಟ, ಹೀಗೆ ಬೇರೆ ಬೇರೆ ಸಮಯಗಳಲ್ಲಿ ಬೇರೆ ಬೇರೆ ವ್ಯಕ್ತಿಗಳಿಂದಾದ ಸಾವಿರಾರು ಅನುಭವಗಳು ನೆನಪಿನ ರೂಪದಲ್ಲಿ ನಮ್ಮ ಮನಸ್ಸಿನ ಆಳದಲ್ಲಿ ಕುಳಿತಿರುತ್ತದೆ ಅಲ್ಲವೆ? ಕೆಲವು ನಾವು ಬೇಕೆಂದಾಗ ಮನಃಪಟಲಕ್ಕೆ ಬಂದು ಕೂರುತ್ತವೆ, ಕೆಲವು ತಮ್ಮಷ್ಟಕ್ಕೆ ತಾವೇ ಬಂದು ಕುಣಿದಾಡುತ್ತಿರುತ್ತವೆ, ಮತ್ತೆ ಕೆಲವು ನಮ್ಮ ಪ್ರಮೇಯವೇ ಇಲ್ಲದೆ ಮೇಲಕ್ಕೆ ಪುಟಿದು ನೆನಪಿನಂಗಳಕ್ಕೆ ಬಂದು ಕುಣಿದಾಡುತ್ತಾ ನಮ್ಮನ್ನು ಕಾಡುತ್ತಿರುತ್ತವೆ. ಹಾಗೆ ಅವಶ್ಯಕತೆ ಇದ್ದು ಬರುವ ನೆನಪುಗಳು ನಮಗುಪಯುಕ್ತವಾಗಿರುತ್ತವೆ. ಆದರೆ ತಮ್ಮಷ್ಟಕ್ಕೆ ತಾವೇ ಬರುವ ನೆನಪುಗಳು ಅನಾವಶ್ಯಕವಾಗಿ ನಮ್ಮ ಮನಸ್ಸಿನ ಅಂಗಳವನ್ನು ಆಕ್ರಮಿಸಿ ಮನಃಶಾಂತಿಯನ್ನು ಕದಡುತ್ತಿರುತ್ತವೆ. ಅದರಿಂದ ಮುಕ್ತಿ ಪಡೆಯಲು ನಮ್ಮ ಪುರಾತನರು ಮತ್ತು ಸನಾತನರು ನಮಗೆ ಹಲವಾರು ಮಾರ್ಗಗಳನ್ನು ತೋರಿದ್ದಾರೆ.
ನೆನಪುಗಳಿಂದ ‘ಒಳಿತೂ’ ಉಂಟು ಮತ್ತು ‘ಕೆಡುಕೂ’
ಉಂಟು. ಒಳಿತು ಹೇಗೆಂದರೆ, ಆ ನೆನಪುಗಳಿಂದ
ಹಿಂದೆ ನಾವು ಮಾಡಿದ ತಪ್ಪುಗಳನ್ನು ಮತ್ತೆ ಮಾಡದಂತೆ ನಮ್ಮನ್ನು ನಾವು
ತಿದ್ದಿಕೊಳ್ಳಬಹುದು. ಕೆಡುಕು ಹೇಗೆಂದರೆ ಈ ನೆನಪುಗಳ ತೀವ್ರತೆ ಅಧಿಕವಾದರೆ ಅವು ನಮ್ಮ
ಜೀವನದಲ್ಲಿ ಮುಂದಿನ ಹೆಜ್ಜೆ ಹಾಕಲು ತಡೆಯುವ ಕಡಿವಾಣದಂತೆ ಇರುತ್ತದೆ.
"ಗತಂ ನ ಶೋಚಿತವ್ಯಂ" ಎಂದು
ಹೇಳಲ್ಪಟ್ಟಿದೆ. ಹಾಗಾಗಿ ಯಾವುದು
ಬದಲಾಗುವುದಿಲ್ಲವೋ ಅದರಿಂದ ಬೇರೇನೂ ಪ್ರಯೊಜನವಿಲ್ಲವಾದ್ದರಿಂದ ಅದನ್ನು ಪ್ರಯತ್ನ
ಪೂರ್ವಕವಾಗಿಯಾದರೂ ಮರೆಯುವುದೇ ಲೇಸು. ಇದಕ್ಕೆ ಮಾರ್ಗವೇನೆಂದರೆ, ನಮ್ಮನ್ನು ನಾವು ಸದಾಕಾಲ ಕ್ರಿಯಾತ್ಮಕವಾಗಿ
ತೊಡಗಿಸಿಕೊಂಡರೆ, ನಮ್ಮ ನೆನಪುಗಳ ಸುಳಿಯಲ್ಲಿ ಸುತ್ತಲು ನಮಗೆ ಸಮಯವೇ ಇಲ್ಲದಂತಾಗಿ, ಆ ನೆನಪುಗಳು ಮಾಡುವ ಘಾಸಿಯಿಂದ ನಮ್ಮನ್ನು ನಾವು
ಕಾಪಾಡಿಕೊಳ್ಳಬಹುದು. ಭೂತದ ನೆನಪು ಮತ್ತು ವರ್ತಮಾನದ ವಿಷಯಗಳ ಮಧ್ಯೆ ಸಮನ್ವಯವನ್ನು
ಕಾಪಾಡಿಕೊಳ್ಳುವುದೇ ಬುಧ್ಧಿವಂತಿಕೆ ಮತ್ತು ಜಾಣತನ. ಅಂತಹ ಸಮನ್ವಯಕ್ಕೆ ಪ್ರಯತ್ನಿಸಿ ನಾವು
ಯಶಸ್ವನ್ನು ಪಡೆದರೆ ಅದೇ ಒಂದು 'ಸಾಧನೆ'ಯಾಗುತ್ತದೆ. ನಮ್ಮ ನಿರ್ಲಿಪ್ತತೆಯ ತೀವ್ರತೆ ಎಷ್ಟು ಹೆಚ್ಚಾದರೆ, ನೆನಪುಗಳಿಂದಾಗುವ ನೋವು ಅಷ್ಟು ಕಡಿಮೆಯಾಗುತ್ತದೆ.
ಓದುವುದು, ಸಂಗೀತ ಕೇಳುವುದು, ಧ್ಯಾನಮಾಡುವದು ಮುಂತಾದ ಯಾವುದಾದರೂ ಉಪಯುಕ್ತ ಕೆಲಸಗಳಲ್ಲಿ ನಮ್ಮನ್ನು ನಾವೇ
ತೊಡಗಿಸಿಕೊಂಡು ನಮ್ಮನ್ನು ನಾವು ಸಕ್ರಿಯವಾಗಿರಿಸಿಕೊಂಡರೆ ಬಹುಶಃ ನಮಗೆ ಹಳೆಯ
ವಿಚಾರಗಳನ್ನು ಯೋಚಿಸಲು ಸಮಯವಿಲ್ಲದೆ, ಹಳೆಯ ನೆನಪುಗಳು ಮಾಡಬಹುದಾದ ಘಾಸಿ ಅಥವಾ ಕೊಡಬಹುದಾದ ನೋವಿಂದ ನಾವು ಮುಕ್ತರಾಗಬಹುದು. ಇದು
ಪ್ರಯತ್ನಪಟ್ಟರೆ ಎಲ್ಲರಿಗೂ ಸಾಧ್ಯವಾಗುತ್ತದೆ.
No comments:
Post a Comment