Monday 5 October 2015

ಮೋಕ್ಷ

ಮೋಕ್ಷ 
     
ಭಾರತೀಯ ತತ್ವಶಾಸ್ತ್ರದ ಅನುಸಾರ,ಪ್ರಪಂಚವನ್ನು ಸಂಸಾರ ಎಂದರೆ ನೋವು ಮತ್ತು ಸಂಕಷ್ಟಗಳ ಸುಳಿ ಎಂದು ಕರೆದಿದ್ದಾರೆ. "ಸಂಸಾರ" ಎಂಬ ಸಂಸೃತ ಪದದ ಅರ್ಥ, ಬೇರೆ ಬೇರೆ ಲೋಕಗಳಲ್ಲಿ ಆತ್ಮದ ನಿರಂತರ ಪಯಣ ಅಥವಾ ಪರ್ಯಾಯವಾಗಿ ಜನನ ಮರಣಗಳ ನಿರಂತರ ಚಕ್ರ ಎಂದರ್ಥ. ಅಲಂಕಾರಿಕವಾಗಿ "ಸಂಸಾರ ಸಾಗರ"ಅಥವಾ "ಭವ ಸಾಗರ" ಎಂದೂ "ಪ್ರಾಪಂಚಿಕ ವ್ಯವಹಾರಗಳ ಕಡಲುಎಂದೂ ಕರೆದಿದ್ದಾರೆ. ಮಾನವನಿಗೆ ಇದನ್ನು ದಾಟಲು ಆತ್ಮಜ್ಞಾನ ಉಂಟಾಗಬೇಕು ಅಥವಾ ಪರಮಾತ್ಮನ ಕೃಪೆಯಾಗಬೇಕು. 

'ಆತ್ಮ'ವು ಗೊತ್ತು ಗುರಿಯಿಲ್ಲದನಿರಂತರ ಜೀವನ್ಮರಣಗಳ ಸಂಕೋಲೆಯಲ್ಲಿ ಸಿಲುಕಿತೊಳಲಿಬಳಲಿ ಗಮ್ಯವನ್ನು ಸೇರಲಾಗದೆಅನ೦ತಾನಂದವನ್ನು ಪಡೆಯದೆ,ಮತ್ತೆ ಮತ್ತೆ ಹುಟ್ಟಲು,ನಾಶವಾಗುತ್ತದೆ. ಈ ಭವಸಾಗರವನ್ನು ದಾಟಲು ಆತ್ಮ ಮಾಡುವ ಪ್ರಯತ್ನಗಳನ್ನೇ ವಸ್ತುವಾಗಿಟ್ಟುಕೊಂಡು ಸಾವಿರಾರು ಶ್ಲೋಕಗಳು ಮತ್ತು ಕಥೆ ಪುರಾಣಗಳ ಸಾಹಿತ್ಯ ನಮಗೆ ವಿಫುಲವಾಗಿ ಸಿಗುತ್ತದೆ. 

ಕೆಲವರಿಗೆ ಇಂದ್ರಿಯ ಸುಖ ಭೋಗಗಳಲ್ಲೇ ಆನಂದ ಸಿಗುತ್ತದೆ ಎಂಬ ಭ್ರಮೆ. ಮತ್ತೆ ಕೆಲವರಿಗೆ ಹಣಹೆಸರುಅಧಿಕಾರಅಂತಸ್ತು ಮುಂತಾದವುಗಳಲ್ಲಿ ಆನಂದ ಉಂಟೆಂದು ಭ್ರಾಂತಿ. ಮತ್ತೆ ಕೆಲವರ ಅಭಿಪ್ರಾಯದಲ್ಲಿ ಸಾಹಿತ್ಯ,ವಿಜ್ಞಾನ,ಗ್ರಂಥಾಭ್ಯಾಸದಲ್ಲೇ ಆನಂದ. ಆದರೆ ಈ ಎಲ್ಲ ರೀತಿಯ ಜ್ಞಾನವು ಮಾನವನಿಗೆ ಈ ಜನನ ಮರಣದ ಚಕ್ರದಿಂದ  ಮುಕ್ತಿ ಕೊಡುವುದಿಲ್ಲ. 

ಮುಕ್ತಿ ಎಂದರೇನು?

ಹಾಗಾದರೆ ಮುಕ್ತಿ ಎಂದರೇನುಏನು ಮಾಡುವುದರಿಂದ ಮನುಷ್ಯ 'ಮುಕ್ತ' ನಾಗುತ್ತಾನೆ. ಈ ಪ್ರಶ್ನೆಗೆ ಭಾರತೀಯ ತತ್ವ ಶಾಸ್ತ್ರದ ಬೇರೆ ಬೇರೆ ಶಾಖೆಗಳು ಬೇರೆ ಬೇರೆ ಉತ್ತರಗಳನ್ನು ನೀಡಿವೆ. ಎಲ್ಲಾ ಮೀಮಾಂಸೆಗಳೂ ಭಿನ್ನ ಭಿನ್ನವಾಗಿದ್ದರೂ, 'ಜೀವಿ' ಮೌಡ್ಯವನ್ನು ತೊರೆದು ಪರಮಾತ್ಮ ವಸ್ತುವಿನ ಸತ್ಯ ಸ್ವರೂಪವನ್ನು ಅರಿತಾಗ ಜೀವಿಗೆ ಮುಕ್ತಿ ಎಂಬ ವಿಚಾರದಲ್ಲಿ ಎಲ್ಲ ಶಾಖೆಗಳಲ್ಲೂ ಏಕೀಭಾವವುಂಟು.   

ಹಾಗಾದರೆ ಮೌಡ್ಯವೆಂದರೇನುಆತ್ಮದ ಸ್ವರೂಪವೇನುಆತ್ಮ ಸ್ವರೂಪದ ಜ್ಞಾನ ಉಂಟಾಗದಂತೆ ಈ ಮನಸ್ಸು-ಬುಧ್ಧಿಗಳಿಗೆ ಈ ಮೌಡ್ಯವು ಹೇಗೆ ಮತ್ತು ಏಕೆ ಕವಿಯುತ್ತದೆ? ಎನ್ನುವ ಪ್ರಶ್ನೆಗಳಿಗೆ ಉತ್ತರವನ್ನೀಯುತ್ತಾ ಬೇರೆ ಬೇರೆ ಬೋಧಕರುಆಚಾರ್ಯರು ಮತ್ತು ಮತ ಪ್ರತಿಪಾದಕರು ತಮ್ಮದೇ ರೀತಿಯಲ್ಲಿ ಈ ಪ್ರಶ್ನೆಗಳಿಗೆ ವ್ಯಾಖ್ಯಾನ ಮಾಡಿದ್ದಾರೆ. ಹಾಗಾಗಿ ಆತ್ಮಜ್ಞಾನವನ್ನು ಪಡೆದು ಮೋಕ್ಷ ಸಾಧಿಸಲಿಕ್ಕೂ ಸಹ ಮಾರ್ಗಗಳು ವಿಭಿನ್ನವಾಗಿ ಕಾಣುತ್ತವೆ. 

ದ್ವೈತ ಸಿಧ್ಧಾಂತದ ಪ್ರಕಾರ ಮುಕ್ತಿ: 

ಈ ಸ್ಥೂಲ ಶರೀದಲ್ಲಿರುವತನಕ ಆತ್ಮಕ್ಕೆ ಮುಕ್ತಿಯಿಲ್ಲ. ಆತ್ಮ ಶರೀರ ತ್ಯಜಿಸಿದರೆ ಮುಕ್ತಿ. ಆದರೆ ಮನಸ್ಸು ಬುಧ್ಧಿಗಳನ್ನು ಶುಧ್ಧಗೊಳಿಸುವ ಪ್ರಕ್ರಿಯೆಗೆ ಶರೀರವು ಬೇಕೇ ಬೇಕು. ಶರೀರದ ಮಾಧ್ಯಮದಿಂದ ಮನಸ್ಸು ಬುಧ್ಧಿಗಳನ್ನು ಶುಧ್ಧೀಕರಿಸಿದರೆ,'ಜೀವಿ' ಮೋಕ್ಷಕ್ಕೆ ಪಾತ್ರನಾಗುತ್ತಾನೆ. ಸಾಧಕ ಅನುಸರಿಸಬೇಕಾದ ಆಧ್ಯಾತ್ಮಿಕ ನಿಯಮಗಳು ಮತ್ತು ಗ್ರಂಥಾದೇಶಗಳು ಯಾವುವೆಂದರೆಮನಸ್ಸು, ಬುದ್ಧಿ, ಕರ್ಮ ಮತ್ತು ವಾಕ್ಕಿನ ಬಾಹ್ಯ ಮತ್ತು ಆಂತರಿಕ ಶುಧ್ಧಿನೈತಿಕತೆ ಮತ್ತು ಶುದ್ಧತೆಯಿಂದ ಕೂಡಿದಅಹಿಂಸೆಯನ್ನು ಪಾಲಿಸುತ್ತಾ  ವಿಷಯಗಳಿಗೆ ಅಂಟದ  ಸರಳವಾದ  ಜೀವನ ನಡೆಸುವುದುತಾನು ನಂಬಿದ ದೈವದಲ್ಲಿ  ಸಂಪೂರ್ಣ ಶರಣಾಗತಿತಾಳ್ಮೆಭಕ್ತಿ ಪೂರಿತ ಪೂಜೆ ಮತ್ತು ಧ್ಯಾನ ಇತ್ಯಾದಿ. ಆದರೆ ಇಂತಹ ಅತೀ ಕಷ್ಟಕರವಾದ ಜೀವನ ಶೈಲಿಯನ್ನು ಪಾಲಿಸುತ್ತಾ ಹೋದರೆ ದೈವ ಕೃಪಯಿಂದಜೀವನಿಗ ಮುಕ್ತಿ ಸಿಗಬಹುದು.  ಜೀವಿಗೆ ಸಿಗುವ ಮುಕ್ತಿಯು ನಾಲ್ಕು ವಿಧವಾಗಿರುತ್ತದೆನ್ನುತ್ತದೆ ದ್ವೈತ ಸಿಧ್ಧಾಂತ. ಅವುಗಳಾವುದೆಂದರೆ : 

ಸಾಲೋಕ್ಯ ಇಷ್ಟದೇವತಾ ಲೋಕವನ್ನು ಸೇರಿ ಆನಂದಿಸುವುದು. 
ಸಾಮೀಪ್ಯ ಪರಮಾತ್ಮ ವಸ್ತುವಿನ ಹತ್ತಿರವಿದ್ದು ಆನಂದಿಸುವುದು. 
ಸಾರೂಪ್ಯ ದೇವತಾರೂಪವನ್ನೇ ಪಡೆದು ಆನಂದಿಸುವುದು. 
ಸಾಯುಜ್ಯ - ಪರಮಾತ್ಮ ವಸ್ತುವನ್ನೇ ಸೇರಿ ಆನಂದಿಸುವುದು.  

ವಿಶಿಷ್ಟಾದ್ವೈತದ ಪ್ರಕಾರ ಮುಕ್ತಿ : 

ವೇದಾಂತದ ಈ ಶಾಖೆಯೂ ಜೀವಿಗೆ ದೇಹಸಂಬಂಧವಿರುವವರೆಗೂ ಮುಕ್ತಿ ಇಲ್ಲ ಎಂಬುದನ್ನು ನಂಬುತ್ತದೆ. ಮೃತ್ಯುವಿನ ನಂತರವೇ ಜೀವನಿಗೆ ಮುಕ್ತಿ ಎನ್ನುತ್ತದೆ ವಿಶಿಷ್ಟಾದ್ವೈತ. ಹೆಚ್ಚೂ ಕಡಿಮೆಮೋಕ್ಷದ ತತ್ವದ್ವೈತ ಸಿಧ್ಧಾಂತದ ರೀತಿಯೇ ಇದೇ. ಆದರೆ ಈ ಶಾಖೆ ಮುಕ್ತಿಯ ಬೇರೆ ಬೇರೆ ಸ್ತರಗಳನ್ನು ಸೂಚಿಸಿಲ್ಲ. ಜೀವವು ಆಧ್ಯಾತ್ಮಿಕ ನಿಯಮಗಳನ್ನು ಪಾಲಿಸುತ್ತಾಪರಮಾತ್ಮನಿಗೆ ಸಂಪೂರ್ಣ ಶರಣಾಗತನಾದರೆಮುಕ್ತಿ ಪಡೆದುಶ್ರೀಮನ್ಮಹಾವಿಷ್ಣುವಿನ ವೈಕುಂಠವನ್ನು ಸೇರಿ ತನ್ನ ಇಷ್ಟದೇವತಾ ಸೇವೆಯಲ್ಲಿ ನಿರಂತರ ಆನಂದವನ್ನು ಪಡೆಯುತ್ತದೆ ಎಂದು ಹೇಳುತ್ತದೆ ವಿಶಿಷ್ಟಾದ್ವೈತ. ಅಲ್ಲಿ ಜೀವಿಯು ಸೃಷ್ಟಿಸ್ಥಿತಿ ಮತ್ತು ಲಯದಂತಹ ಗುಣಗಳನ್ನು ಹೊರತುಮಿಕ್ಕೆಲ್ಲ ದೈವ ಶಕ್ತಿಯನ್ನು ಪಡೆದು ಕೊಳ್ಳುತ್ತದೆ. ಮುಕ್ತಿಗೆ ಭಕ್ತಿಯೋಗವೊಂದೇ ಮಾರ್ಗವೆನ್ನುತ್ತದೆ ವಿಶಿಷ್ಟಾದ್ವೈತ. ಕರ್ಮ ಮತ್ತು ಜ್ಞಾನಯೋಗಗಳು ಕೇವಲ ಸಾಧಕನನ್ನು ಭಕ್ತಿ ಯೋಗಕ್ಕೆ ಸೇರಿಸುವ ಸಾಧನಗಳೆಂದು ಅಭಿಪ್ರಾಯಪಡುತ್ತದೆವಿಶಿಷ್ಟಾದ್ವೈತ.  
  
ಆದ್ವೈತದ ಪ್ರಕಾರ ಮುಕ್ತಿ :

ಜೀವಿಗೆ ತನ್ನ ಸ್ವ-ರೂಪವನ್ನು ಅರಿತುಕೊಳ್ಳಲು ಬಾಧಕವಾಗಿಕಾರ್ಮೋಡದಂತೆ ಆವರಿಸಿರುವ 'ಅಜ್ಞಾನ ಮತ್ತು ಅವಿದ್ಯೆ'ಯನ್ನು ತೊಡೆದುಕೊಂಡಾಗಲೇ ಜೀವಿಗೆ ಸಂಸಾರ ಸಾಗರದಿಂದ ಮುಕ್ತಿ ಎನ್ನುತ್ತದೆ ಅದ್ವೈತ ಸಿಧ್ಧಾಂತ. ಅವಿದ್ಯೆಯ ಕಾರಣದಿಂದಾಗಿ ಮತ್ತು ಪ್ರಪಂಚದ ಸಂಪರ್ಕದಿಂದಾಗಿಒಂದೇ ಆಗಿರುವ ಜೀವಾತ್ಮ ತನ್ನನ್ನು ತಾನೇ ಬೇರೆ ಎಂದು ಗುರುತಿಸಿಕೊಂಡು,ಜನನ ಮರಣಗಳ ಸುಳಿಯಲ್ಲಿ ಸಿಕ್ಕು ತೊಳಲಾಡುತ್ತದೆ. 

ಚತುರ್ವಿಧ ಯೋಗದಿಂದ ವ್ಯಕ್ತಿ ವಸ್ತು ವಿಶ್ಲೇಷಣಾ ಮತ್ತು ತಾರತಮ್ಯ ಜ್ಞಾನದಿಂದತ್ಯಾಗವನ್ನು ಅಭ್ಯಸಿಸುತ್ತಾನೆ. ತ್ಯಾಗದಿಂದ ಮನದ ಕಶ್ಮಲಗಳೆಲ್ಲ ತೊಲಗಿ ಶುದ್ಧವಾಗುತ್ತದೆ. ಶುದ್ಧಮನಸ್ಸುಪರಬ್ರಹ್ಮವಸ್ತುವಿನಲ್ಲಿ ಆಳವಾದ ಧ್ಯಾನದಲ್ಲಿ ತನ್ನನ್ನು ತೊಡಗಿಸಿಕೊಂಡುಆತ್ಮಜ್ಞಾನವನ್ನು ಅಥವಾ ಬ್ರಹ್ಮ ಜ್ಞಾನವನ್ನು ಪಡೆದುಕೊಂಡುಅವಿದ್ಯೆ ಮತ್ತು ಅಜ್ಞಾನವನ್ನು ತೊಲಗಿಸಿಕೊಂಡುಪರಬ್ರಹ್ಮ ವಸ್ತುವಿನೊಡನೆಏಕತ್ವವನ್ನು ಅನುಭವಿಸುತ್ತಾ, ಆ  ಪರಮಾತ್ಮ ವಸ್ತುವಿನೊಡನೆ ಏಕೀಭಾವವನ್ನು ಅನುಭವಿಸುತ್ತಾ, ಸಂಪೂರ್ಣ ಜ್ಞಾನ ಮತ್ತು ಆನಂದವನ್ನು ಅನುಭವಿಸುತ್ತಾನೆ. 

ಸಾಂಖ್ಯ ತತ್ವಶಾಸ್ತ್ರ  ಸಿದ್ಧಾಂತದ ಪ್ರಕಾರ ಮುಕ್ತಿ ಅಥವಾ ಮೋಕ್ಷ 

ಈ ಶಾಖೆಯು ಎರಡು ಸಂಪೂರ್ಣ ಸತ್ಯಗಳನ್ನು ಅಧಾರವನ್ನಾಗಿ ಇಟ್ಟುಕೊಂಡಿದೆ. ಒಂದು ಆತ್ಮ ಅಥವಾ ಚೇತನದ ರೂಪದಲ್ಲಿರುವ ಚೇತನಾತ್ಮಕ ಪುರುಷ ಮತ್ತು ಎರಡು, ಉನ್ನತ ವಿಕಸಿತ ಸ್ಥರದಲ್ಲಿರುವ  ಜಡ ಪ್ರಕೃತಿ. ಇಲ್ಲಿ ಪುರುಷ ಎಂದರೆ ಶುದ್ಧ ಚೇತನ, ಆದರೆ ಅವಿವೇಕದ ಕಾರಣ ಅದು ತಪ್ಪಾಗಿ ತನ್ನನ್ನು ತಾನು, ಈ ಜಗತ್ತಿನೊಂದಿಗೆ, ಅಂದರೆ ಜಡ ಪ್ರಕೃತಿಯೊಂದಿಗೆ, ಗುರುತಿಸಿಕೊಂಡು, ಪ್ರಕೃತಿ ಸಂಬಂಧದಿಂದ ಸಂತೋಷ, ಆನಂದ, ನೋವು, ಸಂಕಟ ಮುಂತಾದ ಭಾವಗಳನ್ನು ಅನುಭವಿಸುತ್ತದೆ. ತಾನು ಈ ಪ್ರಕೃತಿಯಿಂದ ಭಿನ್ನ ಎನ್ನುವ ಜ್ಞಾನ ಪ್ರಾಪ್ತಿಯಾದಾಗ, ಆತ್ಮ ಮುಕ್ತಿಯನ್ನು ಪಡೆಯುತ್ತದೆ.  ಯಾವ ಜ್ಞಾನದಿಂದ, ಚೇತನ ಯುಕ್ತಾಯುಕ್ತತೆಯನ್ನರಿತು, ಜಗತ್ತಿನೊಂದಿಗಿನ ಮಮಕಾರದ ಭಾವದಿಂದ ಹೊರಬರುತ್ತದೋ ಅದು 'ವಿವೇಕ ಜ್ಞಾನ'.  ಎಂದು, ಜೀವ ತನ್ನನ್ನು ತಾನು ಪ್ರಕೃ ತಿಯೊಂದಿಗಲ್ಲದೆ,   ಪ್ರಕೃತಿಯಲ್ಲಿ ಹಲವಾರು ನಾಮ ರೂಪಗಳೊಂದಿಗೆ ಪ್ರಕಟವಾಗಿರುವ 'ಪುರುಷ' ನೊಂದಿಗೆ ಸಂಪೂರ್ಣವಾಗಿ ಗುರುತಿಸಿಕೊಳ್ಳುತ್ತದೋ, ಅಂದು ಜೀವನಿಗೆ ಮುಕ್ತಿ ಸಿಗುತ್ತದೆ. 'ಪ್ರಕೃತಿ ಮತ್ತು ಪುರುಷ' ನ ನಡುವಿನ ಅಂತರವನ್ನು ನಿಚ್ಚಳವಾಗಿ ಅರಿತಾಗ 'ಜೀವ'ನಿಗೆ ಪರಮಾನಂದವುಂಟಾಗುತ್ತದೆ. ಹೀಗೆ ಸಾಂಖ್ಯ ಶಾಸ್ತ್ರವು  ಜ್ಞಾನಯೋಗ ಮತ್ತು  ಕರ್ಮಯೋಗಗಳ ಮೂಲಕ 'ಮುಕ್ತಿ', ಎಂದು ಪ್ರತಿಪಾದಿಸುತ್ತದೆ.ಅಂತಹ ಮುಕ್ತಿ 'ಜೀವ'ನಿಗೆ ನೋವು ಮತ್ತು ಸಂಕಟದಿಂದ ಸಂಪೂರ್ಣ ಬಿಡುಗಡೆಯನ್ನು ನೀಡುತ್ತದೆ. ಅಂತಹ ಸ್ಥಿತಿಗೆ ' ಕೈವಲ್ಯ'ವೆಂದು ಹೆಸರು.  ಅದ್ವೈತ ಸಿದ್ಧಾಂತದಲ್ಲಿ ಪ್ರತಿಪಾದಿಸಿದಂತೆ, ಸಾಂಖ್ಯ ಸಿದ್ಧಾಂತವೂ ಜೀವಂತವಾಗಿರುವಾಗಲೇ ಮುಕ್ತ  ಸ್ಥಿತಿಯನ್ನು ಒಪ್ಪಿಕೊಳ್ಳುತ್ತದೆ. ಅದು 'ಜೀವನ್ಮುಕ್ತ' ಸ್ಥಿತಿ, ಎಂದರೆ ಜೀವಂತವಾಗಿರುವಾಗಲೇ ' ಮುಕ್ತ'ವಾದ ಸ್ಥಿತಿ.


ಶ್ರೀಮದ್ಭಗವದ್ಗೀತೆಯಲ್ಲಿ (೧೩-
 ೨)  "ಇದಂ ಶರೀರಂ ಕೌಂತೇಯ ಕ್ಷೇತ್ರಮಿತ್ಯಭಿಧೀಯತೇ। ಏತದ್ಯೋ ವೇತ್ತಿ ತಂ  ಪ್ರಾಹು: ಕ್ಷೇತ್ರಜ್ಞ ಇತಿ ತದ್ವಿದಃ ।।" ಎನ್ನುತ್ತಾನೆ ಶ್ರೀ ಕೃಷ್ಣ. ಎಂದರೆ ನಿಜವಾದ ಜ್ಞಾನವೆಂದರೆ ' ಕ್ಷೇತ್ರದ ಜ್ಞಾನ' ಎಂದರೆ 'ನೆಲೆ' ಯ ಜ್ಞಾನ. ಯಾರು 'ಚೇತನ ಮತ್ತು ಜಡ' ದ ಜ್ಞಾನವನ್ನು ಮತ್ತು ಅವುಗಳ ನಡುವಿನ ವ್ಯತ್ಯಾಸದ ನಿಚ್ಚಳವಾದ ಜ್ಞಾನವನ್ನು ಹೊಂದಿರುತ್ತಾನೋ, ಅವನನ್ನು 'ಕ್ಷೇತ್ರಜ್ಞ'  ಎಂದು ಕರೆಯುತ್ತಾರೆ. ಜಗತ್ತಿನಲ್ಲಿ ಯಾವುದನ್ನು 'ವಸ್ತು' ವೆಂದು ರೂಪ ಮತ್ತು ಹೆಸರುಗಳಿಂದ ಗುರುತಿಸುತ್ತಾರೋ ಅದನ್ನು ' ಕ್ಷೇತ್ರ'ವೆಂದೂ ಮತ್ತು ಯಾವುದು ಈ ಕ್ಷೇತ್ರದ ಒಳಗೂ ಹೊರಗೂ ವ್ಯಾಪಕವಾಗಿದೆಯೋ ಮತ್ತು ಯಾವುದರ ಸಹಾಯದಿಂದಲೇ ನಾವು ಕ್ಷೇತ್ರವನ್ನು ಅರಿಯಲಾಗುವುದೋ, ಅದನ್ನು ' ಕ್ಷೇತ್ರಜ್ಞ' ಎನ್ನಲಾಗಿದೆ.  

ಸಾಧಕನು, ರೂಪ ಮತ್ತು ನಾಮಗಳನ್ನು ಹೊಂದಿದ ದೇಹದಲ್ಲಿದ್ದರೂ, ತನ್ನ ಮತ್ತು ತಾನಿರುವ ದೇಹದ ನಡುವಿನ ಅಂತರ ಮತ್ತು ವ್ಯತ್ಯಾಸವನ್ನು ಸ್ಫುಟವಾಗಿ ಅರಿತಾಗ ಮತ್ತು ತನ್ನನ್ನು ತಾನು ಚೇತನವೆಂದು ಅರಿತಾಗ, 'ಆತ್ಮಜ್ಞಾನಿ'ಯಾಗುತ್ತಾನೆ. ಅಂತಹ ಆತ್ಮಜ್ಞಾನದಿಂದ ಸಾಧಕ ' ಮುಕ್ತ'ನಾಗುತ್ತಾನೆ, ಯೋಗಿ'ಎನಿಸಿಕೊಳ್ಳುತ್ತಾನೆ.    

ರವಿ ತಿರುಮಲೈ 

Friday 21 August 2015

ನಾನು - ನೀನು

ನಾನು ನಾನೇ, ನೀನು ನೀನೇ
ನಾನು, ನೀನು ಬೇರಲ್ಲದಿದ್ದರೂ 
ನೀನು ನಾನಾಗಲೊಲ್ಲೆ 
ನಾನು ನೀನಾಗಲಾರೆ

ನನ್ನಿಂದಲೇ ನೀನಾದರೂ  
ನನ್ನಿಂದ ತೀರ ಬೇರಾದೆ 
ನಿನಗೆ ನಾನಾಗಲು 
ಅದೇಕೋ ಮನಸೇ ಬಾರದಿದೆ 

ನಿನ್ನ ಆಸೆಗಳೇ ಬೇರೆ 
ನನ್ನ ಆಶಯಗಳೇ ಬೇರೆ 
ನೀನವುಗಳಿಗೆಲ್ಲ ಅಂಟಿದ್ದೀಯೆ 
ನಾ ಅಂಟನೆಲ್ಲಾ ಮೆಟ್ಟಿ ನಿಂತಿದ್ದೇನೆ 

ನಾನು ಸತ್ಯ, ನೀನು ಮಿಥ್ಯ 
ನನಗರಿವುಂಟು,ನಿನಗರಿವಿಲ್ಲ 
ನಿನಗರಿವುಂಟಾಗುವವರೆಗೆ 
ಕಾಯದೆ, ಬೇರೆ ದಾರಿಯೆನಗಿಲ್ಲ 

ತೊಳೆದುಕೋ ಅಂಟನ್ನು 
ಬಿಡಿಸಿಕೊ ನಂಟನ್ನು 
ಬಂದು ಸೇರು ನನ್ನ 
ಅಳಿಸಿಹಾಕು ನಿನ್ನ 

ನಾ ನೀನಾಗಲು ಸಾಧ್ಯವೇ ಇಲ್ಲ 
ನೀ ನಾನಾದರೆ, 'ಸಾಧನೆ'ಯೇ ಎಲ್ಲ 
ನೀ, ಎನ್ನೊಳಗೆ  ಸೇರೆ 
ನಾನು ನೀನು ಒಂದಾದರೆ

ಅಂದೇ ಮುಕ್ತಿ,  ನನಗೂ,  ನಿನಗೂ  

ರವಿ ತಿರುಮಲೈ 

Wednesday 8 April 2015

ಮಂದ ಮತಿಯೂ ನಾನು


ಮಂದ ಮತಿಯು ನಾನು
ನಿನ್ನರಿಯೆ ಸಾಧ್ಯವೇನು
ಮಹಾ ಮಹಿಮನೂ ನೀನು
ಮತಿಭ್ರಾಂತನೂ ನಾನು ।।ಮಂದ ಮತಿಯು।।

ನಾನೇ ಎಲ್ಲ ಗೈವೆನೆಂದು
ನೆನೆದು ನಲಿವ ನರನು ನಾನು
ಎಲ್ಲಕ್ಕೆಲ್ಲಕು ನೀನೆ ಮೂಲ-
ವೆಂಬ ತತ್ವ ಅರಿವಯದವನು ।।ಮಂದ ಮತಿಯು।।

ಆರು ದುಷ್ಟರನಾಶ್ರಯಿಸಿ
ಭ್ರಾಂತಿಯಿಂದ ಬಾಳ ನಡೆಸಿ
ಮಿತ್ಯ ಬಿಡದೆ ಸತ್ಯದೆಡೆಗೆ
ದಿಟ್ಟ ನಡೆಯಲಿಡಲಾರೆನು ।।ಮಂದ ಮತಿಯು।।

ಸತಿ ಸುತರೆ ಸತ್ಯವೆಂದು
ಈ ಜನುಮವೇ ನಿತ್ಯವೆಂದು
ಭ್ರಮೆಯ ಭಾವದಿಂದಲೇ
ಬದುಕ ದೂಡುತಿಹೆನು ನಾನು ।।ಮಂದ ಮತಿಯು।।

ಸೃಷ್ಟಿಕರ್ತನೂ ನೀನು
ಸೃಷ್ಟಿಯೊಂದಂಶ ನಾನು
ಕಷ್ಟದಲ್ಲಷ್ಟೆ ನಿನ್ನ ನೆನೆವ
ಹೀನ ಮನುಜ ನಾನು ।।ಮಂದ ಮತಿಯು।।

ದೇವ ದೇವ ಪೊಡಮೊಡುವೆ
ವರವನೆಂದು ಎನಗೆ ಕೊಡುವೆ
ರತಿ ಪತಿ ಪಿತನೆ ನಿನ್ನ
ಪಾದ ಬಿಡದೆ ನಂಬುವಂತೆ ।।ಮಂದ ಮತಿಯು।।

Saturday 28 March 2015

ಪದ್ಯದಂಗಡಿ - ಕನ್ನಡ ಪ್ರಭ ೨೫ ಮಾರ್ಚ್ ೨೦೧೫


ಗುಂಡಪ್ಪನವರ ಹಾರೈಕೆ


ನನ್ನ ಹುಟ್ಟುಹಬ್ಬದ ದಿನ ಶ್ರೀ ಮಂಜುನಾಥ್ ಶ್ರೀಕಾಂತ್ ಅವರು ನನಗಾಗಿ, 


ಗುಂಡಪ್ಪನವರನ್ನು ಧರೆಗೆ ಕರೆತಂದು ಅವರ   ಹಾರೈಕೆಯನ್ನು ನನಗೆ ತಂದು 


ಕೊಟ್ಟ ಬಗೆ ಹೀಗೆ ......... ಮುಂದೆ ಓದಿ 


ಅರವತ್ತು ಅರವತ್ತು ಅರವತ್ತು... ವಾಹ್

ಒಂದು ಪ್ರಾಥಮಿಕ ಶಾಲೆ

ಮಾಸ್ತರರು ಹೇಳಿದರು.. "ಮಕ್ಕಳೇ ಇಂದು ಹಾಜರಿ ತೆಗೆದುಕೊಳ್ಳಬೇಕು.. ಎಲ್ಲರೂ ಇಂದು ನಿಮ್ಮ ಹೆಸರಿಗೆ ಬದಲಾಗಿ ನಿಮ್ಮ ನಿಮ್ಮ ಕ್ರಮ ಸಂಖ್ಯೆಯನ್ನು ಹೇಳಿ.. ಆದಷ್ಟು ಜೋರಾಗಿ ಹೇಳಬೇಕು ಆಯಿತೆ"

ಮಕ್ಕಳು ಕೂಡ.. ಮಾಸ್ತರರ ದನಿಯನ್ನೇ ಅನುಕರಿಸಿ ಅವರಿಗಿಂತ ತುಸು ಜೋರಾಗಿಯೇ ತಮ್ಮ ತಮ್ಮ ಕ್ರಮ ಸಂಖೆಯಗಳನ್ನು ಹೇಳುತ್ತಾ ಹೋದರು.

ಹತ್ತಾಯಿತು, ಇಪ್ಪತ್ತಾಯಿತು, ಮೂವತ್ತಾಯಿತು, ನಲವತ್ತು ಸಾಲಿನ ಸಂಖ್ಯೆಗಳು ಧಾಟಿ ಐವತ್ತರ ಸಾಲಿಗೆ ಬಂದವು..

"ಐವತ್ತು, ಐವತ್ತೊಂದು, ಐವತ್ತೆರಡು, ಐವತ್ತಮೂರು, ಐವತ್ತನಾಲ್ಕು, ಐವತ್ತೈದು, ಐವತ್ತಾರು, ಐವತ್ತೇಳು, ಐವತ್ತೆಂಟು, ಐವತ್ತೊಂಭತ್ತು... "

ಮಕ್ಕಳು ಮೇಲ್ಚಾವಣಿ ಕಿತ್ತು ಹೋಗುವಂತೆ ಜೋರಾಗಿ ಹೇಳುತ್ತಿದ್ದರು..


ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು,
ಗುರುಗಳು "ಐವತ್ತೊಂಭತ್ತು ಅಂಕೆಯನ್ನು ಐವತ್ತೊಂಭತ್ತು ಬಾರಿ ಹೇಳಾಯಿತು.. ಮುಂದಕ್ಕೆ ಹೇಳ್ರೋ.. ."

ಮಕ್ಕಳು ಸುಮ್ಮನೆ ಗುರುಗಳನ್ನು ನೋಡುತ್ತಾ ಕೂತರು.. ತರಗತಿಯಲ್ಲಿ ಐವತ್ತೊಂಭತ್ತು ವಿಧ್ಯಾರ್ಥಿಗಳು ತಮ್ಮ ಹಾಜರಿ ಕೊಟ್ಟಿದ್ದರು.. .. ಯಾಕೋ ಲೆಕ್ಕ ತಪ್ಪಿತೆ ಎಂದು ಅನುಮಾನಗೊಂಡ ಗುರುಗಳು.. ಕಣ್ಣಲ್ಲೇ ಒಟ್ಟು ವಿಧ್ಯಾರ್ಥಿಗಳ  ಲೆಕ್ಕವನ್ನು ಹಾಕತೊಡಗಿದರು.. ಅರೆ ಹೌದು ನನ್ನ ತರಗತಿಯಲ್ಲಿ ಅರವತ್ತು ವಿಧ್ಯಾರ್ಥಿಗಳು ಇರುವುದು..

ಇದೇನು ಅರವತ್ತನೇ ಹುಡುಗ ಎಲ್ಲಿ.. ಕಣ್ಣಲ್ಲೇ ಹುಡುಕಿದರೂ.. ಕಾಣಲಿಲ್ಲ, ಒಂದು ಕ್ಷಣ ಕಣ್ಣು ಮುಚ್ಚಿ ಕೂತರು..

"ಗ್ರೀಸಿನಾ ಕಬ್ಬಗಳನೋದುವರು ದೆಹಲಿಯಲಿ
ಕಾಶಿಯಾ ಶಾಸ್ತ್ರಗಳನಾಕ್ಸಫರ್ಡಿನವರು |
ದೇಶಕಾಲವಿಭಾಗ ಮನದ ರಾಜ್ಯದೊಳಿರದು
ಶ್ವಾಸವದು ಬೊಮ್ಮನದು – ಮಂಕುತಿಮ್ಮ. ||"

ಜೋರಾಗಿ ಈ ಕಗ್ಗದ ಪದಗಳು ತರಗತಿಯ ಕೊಠಡಿಯ ಬಾಗಿಲಿನ ಬಳಿ ಯಾರೋ ಓದುತ್ತ ಬಂದದ್ದು ಕೇಳಿಸಿತು..

ಗುರುಗಳಿಗೆ ತಕ್ಷಣ ಅರಿವಾಯಿತು.. ಅರೆ ಇದು ನನ್ನದೇ ಮುಕ್ತಕ.. ಅದು ಅರವತ್ತನೆಯದು.. ಸರಿಯಾಗಿದೆ..

ಗುರುಗಳು "ಬಾ ಬಾರೋ ರವಿ.. ಇದು ಅರವತ್ತನೆಯ ಮುಕ್ತಕ.. ಏನಪ್ಪಾ ಇದು ಓದುತ್ತಾ ಬರುತ್ತಿದ್ದೀಯ.. ಏನು ಸಮಾಚಾರ" ರವಿ ಹೇಳುತ್ತಾರೆ.. " ಏನಿಲ್ಲ ಗುರುಗಳೇ.. ಇಂದು ಈ ಕಗ್ಗ ತುಂಬಾ ನೆನಪಿಗೆ ಬಂತು ಅದಕ್ಕೆ ಓದುತ್ತಾ ಬಂದೆ.. ನನಗೆ ಅರಿವಿಲ್ಲದೆ ಓದುತ್ತಾ ಓದುತ್ತಾ.. ಶಾಲೆಯೊಳಗೆ ಕಾಲಿಟ್ಟೆ.. ಅರವತ್ತು ಗುರುಗಳೇ.. ಇದು ನನ್ನ ಹಾಜರಿ" ಎಂದನು ಆ ಪುಟ್ಟ ಹುಡುಗ..

ಗುರುಗಳು ಸಂತಸಭರಿತ ತಲೆ ಸವರುತ್ತಾ "ರವಿ ಪುಟ್ಟಾ.. ನನಗೆ ಅರಿವಿದೆ.. ನೀನು ಭೂಮಿಗೆ ಬಂದು ಅರವತ್ತು ವಸಂತಗಳು ಆಯಿತು.. ಹಾಗೆಯೇ ಈ ಮುಕ್ತಕ ಕೂಡ ಅರವತ್ತನೆಯದು.. ಎಷ್ಟು ಹೊಂದಾಣಿಕೆ ಇದೆ... ನೀನು ನನ್ನ ಮುಕ್ತಕಗಳನ್ನು ನಿನ್ನ ಧಾಟಿಯಲ್ಲಿ ಬರೆಯುತ್ತಿರುವ ಸಂಖ್ಯೆ ನಿನ್ನೆಗೆ ೭೯೯ ಆಗಿದೆ.. ಇನ್ನು ಕೆಲವೇ ಮಾಸಗಳಲ್ಲಿ ನಿನ್ನ ಶೈಲಿಯಲ್ಲಿ ಸಕಲರಿಗೂ ಅರಿವಾಗುವ ಹಾಗೆ ವಿವರಿಸುತ್ತಿರುವ ನನ್ನ ಎಲ್ಲಾ ಮುಕ್ತಕಗಳಿಗೂ ವಿವರಣೆ ಸಿಕ್ಕಿಯೇ ಬಿಡುತ್ತದೆ. ನನಗೆ ಬಲು ಸಂತಸವಾಗುತ್ತಿದೆ. ಇಷ್ಟವಾದುದ್ದನ್ನು, ಕಷ್ಟವಾದುದ್ದನ್ನು, ಮುಕ್ತವಾಗಿದ್ದನ್ನು ಎಲ್ಲರಿಗೂ ತಿಳಿಸುತ್ತಿರುವ ರೀತಿ ನನಗೆ ಬಲು ಇಷ್ಟಮಯ"

ಪುಟಾಣಿ ರವಿ ಕಣ್ಣಲ್ಲೇ ಆನಂದ ಭಾಷ್ಪ.. ಗುರುಗಳ ಹೊಗಳಿಕೆಯನ್ನು, ಬೆನ್ನು ತಟ್ಟುವಿಕೆಯನ್ನು ಅನುಭವಿಸುತ್ತಿರುವ ಅವರ ಮನಸ್ಸು ಭಲೇ ರವಿ ಭಲೇ ಎಂದು ಹೇಳುತ್ತಿತ್ತು.

ಗುರುಗಳು ಮಾತನ್ನು ಮುಂದುವರೆಸಿದರು.. "ರವಿ.. ನೀನು ಇಷ್ಟು ಸಾಧಿಸಿದ್ದರು ನೀನು ಏನು ಸಾಧಿಸಿಲ್ಲ ಎನ್ನುವ ನಿನ್ನ ತಾತ್ವಿಕ ಗುಣ.. ಹಾಗೂ ಸಾಧಿಸಬೇಕಾದ್ದು ಬೇಕಾದಷ್ಟು ಇದೆ ಎನ್ನುವ ನಿನ್ನ ನಮ್ರ ಗುಣವೆ ನಿನ್ನನ್ನು ಪ್ರಾಥಮಿಕ ಶಾಲೆಯಲ್ಲಿ ನನ್ನ ವಿಧ್ಯಾರ್ಥಿಯನ್ನಾಗಿ ಮಾಡಿದೆ.. ಆದರೆ ಇಂದು ಜಗತ್ತಿಗೆ ಹೇಳುತ್ತಿರುವೆ.. ನಿನ್ನದು ಗಜ ಗಾತ್ರದ ಸಾಧನೆ.. ಆದರೆ ನಿನ್ನ ನಮ್ರ ಮನಸ್ಸಿಗೆ ಕಾಣುವುದು ಗುಲಗಂಜಿಯಷ್ಟೇ ಸಾಧನೆ ಎಂದು.. ಅದಕ್ಕೆ ನಿನ್ನನ್ನು ಎಲ್ಲರೂ ಇಷ್ಟಪಡುವುದು.. ನಿನ್ನ ಸ್ನೇಹ ಮಂಡಲ ಸೌರ ಮಂಡಲದಷ್ಟೇ ಪ್ರಕಾಶಮಾನ.. "

ನಿನ್ನ ಅರವತ್ತು ವರ್ಷಗಳ ವಸಂತಮಾಸವನ್ನು ಒಮ್ಮೆ ಇಣುಕಿ ನೋಡಿದಾಗ ನಿನ್ನ ಸಾಧನೆ ಕಂಡು ನಿನ್ನ ಗುರುವಾದ ನನಗೆ ಹೆಮ್ಮೆ ಎನಿಸುತ್ತದೆ.. ಹೌದು ಇಂದು ನೀನು ನನ್ನ ತರಗತಿಯಲ್ಲಿ ಹಾಜರಿ ಹೇಳದೆ ನನ್ನ ಅರವತ್ತನೇ ಮುಕ್ತಕ ಓದುತ್ತಾ ಬಂದಾಗ ನನಗೆ ಆದ ಸಂತಸ ಹೇಳ ತೀರದು.

ರವಿ ನಿನಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಈ ರೀತಿಯಲ್ಲಿ ಹೇಳುತ್ತಿದ್ದೇನೆ.. ಹಾಗೂ ಆಶಿರ್ವದಿಸುತ್ತಿದ್ದೇನೆ.. ನಿನ್ನ ಅರವತ್ತು ವಸಂತಗಳ ಸಾರ್ಥಕ ಜೀವನ ಇನ್ನಷ್ಟು ಪ್ರಜ್ವಲಿಸಲಿ.. ಹೀಗೆ ಯಶಸ್ಸಿನ ಜೀವನ ಮುನ್ನುಗ್ಗಲಿ, ಶತಕದ ಸಾಧನೆ ನಿನ್ನದಾಗಲಿ.

ಕಂದಾ ನಿನಗೆ ಹುಟ್ಟು ಹಬ್ಬದ   ಶುಭಾಶಯಗಳು.. ನನ್ನ ತರಗತಿಯಲ್ಲಿನ ಎಲ್ಲ ವಿಧ್ಯಾರ್ಥಿಗಳಲ್ಲಿ ನೀನು ನನ್ನ ಪ್ರೀತಿಯ ವಿಧೇಯ ವಿಧ್ಯಾರ್ಥಿಗಳಲ್ಲಿ ನೀನು ಮೊದಲ ಸಂಖೆಯಲ್ಲಿ ನಿಲ್ಲುವವನು..

ರವಿ ಪುಟಾಣಿಯ ಕಣ್ಣಲ್ಲಿ ಜೋಗದ ಜಲಧಾರೆ.. ಸಾಕ್ಷಾತ್ ಕಗ್ಗ ಪಿತಾಮಹರೆ ಬಂದು ನನ್ನ ಅರವತ್ತನೇ ವಸಂತಕ್ಕೆ ಶುಭ ಹಾರೈಸಿದ್ದಾರೆ. ಇದಕ್ಕಿಂತ ನನಗೆ ಇನ್ನೇನು ಬೇಕು.. ಕೈಯಲ್ಲಿ ಹಿಡಿದ್ದಿದ ಕಗ್ಗ ಪುಸ್ತಕ ಹಾಗೆ ಜೋಡಿಯಾಗಿ ಆ ಮಹಾನ್ ಕಗ್ಗ ಗುರುಗಳಿಗೆ ನಮಸ್ಕರಿಸುತ್ತಾ ಧನ್ಯೋಸ್ಮಿ ಎಂದಿತು ಆ ಪುಟಾಣಿಯ ಮನಸ್ಸು.

*****

ರವಿ ಗುರುಗಳೇ.. ನಿಮ್ಮ ಜನುಮದಿನಕ್ಕೆ ಶುಭ ಕೋರಬೇಕು ಎಂದು ಹಂಬಲಿಸಿದಾಗ.. ಇಂದು ಯುಗಾದಿ ಹಬ್ಬ.ಹಬ್ಬದ ಸಂಭ್ರಮದಲ್ಲಿ.. ಮನೆ ಮನದಲ್ಲಿ ಇರುವ ಕುಟುಂಬದ ಸದಸ್ಯರೊಡನೆ ಸೇರಿ ನಲಿಯುತ್ತ ಇದ್ದಾಗ.. ದಿನ ಹೇಗೆ ಕಳೆಯಿತು ಎಂದು ಅರಿವಾಗಲೇ ಇಲ್ಲ.. ರಾತ್ರಿ ಮಲಗುವ ಮುನ್ನ ನಿಮಗೆ ಶುಭ ಹಾರೈಸಲೇ ಬೇಕು ಎಂಬ ಹಠ ತೊಟ್ಟು ಬರೆಯಲು ಕೂತಾಗ ಕೆಲವೇ ಕ್ಷಣಗಳಲ್ಲಿ ಈ ಲೇಖನವನ್ನು ನನ್ನ ಮನದೊಳಗೆ ಕೂತು ಬರೆಸಿದ್ದು ನಿಮ್ಮ ಸ್ನೇಹ ಪರ ಮನಸ್ಸು ಹಾಗೂ ಡಿವಿಜಿ ಅಜ್ಜನ ಆಶೀರ್ವಾದ. ಅಜ್ಜನ ಬಾಯಿಂದಲೇ ನಿಮಗೆ ಶುಭಾಶಯಗಳನ್ನು ಹೇಳಿಸಬೇಕು ಎಂಬ ಪಣ ತೊಟ್ಟ ನನ್ನ ಕೀಲಿಮಣೆ .. ನಿಮ್ಮ ಹೆಸರನ್ನು ಹೇಳುವಾಗ ಏಕ ವಚನದಲ್ಲಿ ಬರೆಸಿಯೇ ಬಿಟ್ಟಿತು.. ಬೇರೆ ದಾರಿಯಿಲ್ಲದೆ ಹಾಗೆ ಮಾಡಬೇಕಾಯಿತು. ಕ್ಷಮೆ ಇರಲಿ..
ಕಗ್ಗಗಳ ಪಿತಾಮಹರ ಆಶಿರ್ವಾದದ ನೆರಳಲ್ಲಿ ರವಿ ತಿರುಮಲೈ ಗುರುಗಳು -
(ಚಿತ್ರ ಕೃಪೆ ರವಿ ಸರ್ ಅವರ ಟೈಮ್ ಲೈನ್ )

ನಿಮ್ಮ ಪ್ರತಿದಿನದ ನುಡಿಮುತ್ತುಗಳು, ಕಗ್ಗ ರಸಧಾರೆ, ಜೊತೆಯಲ್ಲಿ ನೀವು ನನ್ನ ಮಾತಾಡಿಸುವಾಗ "ರಾಜ" ಎನ್ನುವ ಆ ಸ್ನೇಹ ಪರ ಧ್ವನಿ ನನಗೆ ಬಲು ಇಷ್ಟ.

ಮತ್ತೊಮ್ಮೆ ನನ್ನ ಸಕಲ ಸ್ನೇಹಲೋಕದ ಸದಸ್ಯರ ಪರವಾಗಿ ಷಷ್ಠಿ ಸಂಭ್ರಮಕ್ಕೆ ಶುಭಾಶಯಗಳು. 

Monday 16 March 2015

ಏನು ಮಾಡಿದರೇನು

ಏನು ಮಾಡಿದರೇನು
ಭವ ಬೀಜವ ಸುಡದೆ
ಭಾವದಲಿ ಬಂದರೇನು
ಬದುಕಿನಲಿ ಬರದೆ

ಹೊತ್ತು
 
ತಂದದ್ದಷ್ಟು
ಗಳಿಸಿಕೊಂಡದ್ದಷ್ಟು
ಗುಣಿಸಿ ಭಾಗಿಸಿ ಕಡೆಗೆ
ಉಳಿಸಿಕೊಂಡದ್ದಷ್ಟು  


ಕೋಪತಾಪದ ಮೂಲ 
ಕರ್ಮಶೇಷದಾ ಜಾಲ 
ಸರ್ಪದೊಲು ಸುತ್ತಿಹುದು 
ಧೀ,ಮನಗಳನು ಮುತ್ತಿಹುದು 

ಕಡೆಯವರೆಗೂ ಬಿಡದು
ಧರಣಿಯ ಸೊಗಡು
ಅಂತ್ಯದಾಚೆಗೂ ಬಂದು
ಮತ್ತೆ ಚಿಗುರಲಿಹುದು

ಸುಡಬೇಕು ಗುಣವನ್ನು 
ಚಿಗುರುವಾ ಕಣವನ್ನು 
ಗುಣರಾಹಿತ್ಯವೇ ಪರಮಾರ್ಥ 
ನಿರ್ಗುಣವೇ ಸುಗುಣ 



ರವಿ ತಿರುಮಲೈ 
೧೭.೦೩.೨೦೧೫

Friday 27 February 2015

ಸುಟ್ಟುಬಿಡು ಭಗವಂತ




ಸುಟ್ಟುಬಿಡು ಭಗವಂತ 
ಚಟ್ಟಕೇರುವ ಮುನ್ನ 
ಶೇಷರಹಿತವಾಗಿ 
ವಿಷಯಾಸಕ್ತಿಗಳನ್ನ 


ಬಿಡಿಸಿಬಿಡು ಭಗವಂತ 
ಅಡಿಗಡಿಗೆ ತೊಡರುವ 
ಭವಬಂಧದ ಲತೆಗಳ 
ಲವಲೇಶವಿರದಂತೆ 


ಕೊಟ್ಟುಬಿಡು ಭಗವಂತ 
ನೆಟ್ಟಗೆ ನಿನ್ನನರಿಯಲೆನಗೆ 
ಸೊಟ್ಟ ನಡಿಗೆಯ ತೊರೆದು 
ದಿಟ್ಟ ನಡಿಗೆಯ ದಾರಿ 


ಜನ್ಮದಂತ್ಯಕೆ ಬಂದು ನೀನೇ ನೆಲೆಸು 
ಹೃನ್ಮನಗಳಲಿ ನೀನೇ ಚಲಿಸು 
ನಾನೆಂಬುವ ಅಹಮನಳಿಸಿ 
'ನೀನೇ' ಎಂಬ ಭಾವವ ನಿಲಿಸು. 


ಚಟ್ಟಕೇರುವ ಮುನ್ನ ಓ ಭಗವಂತ, ಚಟ್ಟಕೇರುವ ಮುನ್ನ................