Wednesday 15 November 2017

ಪರೋಪಕಾರ



ಉಪಕಾರ ಮಾಡುವುದು ನಮ್ಮ ಸಂಸ್ಕೃತಿ. ಪರೋಪಕಾರಕ್ಕೆ ನಮ್ಮ ಸಂಸ್ಕಾರಗಳಲ್ಲಿ ಬಹಳ ಮಹತ್ವವನ್ನು ನೀಡಿದ್ದಾರೆ ನಮ್ಮ ಪೂರ್ವಜರು. ಆದರೆ ಯಾರಿಗೆ ಯಾವ ಸಮಯದಲ್ಲಿ ಯಾವ ರೀತಿಯ ಉಪಕಾರವನ್ನು ಮಾಡಬೇಕು ಎನ್ನುವುದೇ ಜಿಜ್ಞಾಸೆಯ ವಸ್ತುವಾಗುತ್ತದೆ. ಉದಾ:ಯಾರೋ ಒಬ್ಬ ದುಡಿದು ಸುಸ್ತಾಗಿನೆಲದಮೇಲೆ ಮಲಗಿ ನಿದ್ರಿಸುತ್ತಿರುವವನನ್ನು ಅಲುಗಾಡಿಸಿ,  ಎಬ್ಬಿಸಿಹಾಸಿಗೆಯನ್ನು ಹುಡುಕಿಕೊಂಡು ಮಲಗಿಕೋ ಎಂದು ಹೇಳುವುದು ಉಪಕಾರವೇನುಉಪಕಾರಮಾಡುವೆ ಎಂದು ಪರರ ನೆಮ್ಮದಿಯನ್ನು ಕಸಿಯಬಾರದು. ಮತ್ತೊಬ್ಬರಿಗೆ ಒಳಿತನ್ನು ಮಾಡುವುದು ಅಷ್ಟು ಸುಲಭವಲ್ಲ. 

ಒಬ್ಬ ಆರಾಮಾಗಿ ನೆಲದಲ್ಲಿ ಕಾಲ ಮೇಲೆ ಕಾಲ ಹಾಕಿಕೊಂಡು ಮಲಗಿದ್ದನಂತೆ. ಮತ್ಯಾರೋ ಒಬ್ಬ ಬಂದು ಅವನನ್ನು ಎದ್ದೇಳುಚುರುಕಾಗುಕೆಲಸಮಾಡುಅಭಿವೃದ್ಧಿ ಹೊಂದುಸಕಲ ಭಾಗ್ಯಗಳನ್ನೂ ಸಂಪಾದಿಸುಸ್ಥಿತಿವಂತನಾಗುಎಂದು ಉಪದೇಶ ಮಾಡಿದನಂತೆ. ಅದಕ್ಕವನು "ಹಾಗೆಲ್ಲಾ ಮಾಡಿದೇ ಎಂದಿಟ್ಟುಕೊಳ್ಳಿ,  ಮುಂದಕ್ಕೆ?" ಎಂಬ ಪ್ರಶ್ನೆ ಕೇಳಿದಾಗ, 'ಮುಂದಕ್ಕೆಆರಾಮಾಗಿ ಕಾಲಮೇಲೆ ಕಾಲ ಹಾಕಿಕೊಂಡುಮಲಗಿ ಆನಂದವಾಗಿರಬಹುದು" ಎಂದನಂತೆ. " ಅಯ್ಯೋ!!! ನಾ ಈಗಾಗಲೇ ಆ ಸ್ಥಿತಿಯಲ್ಲಿದ್ದೇನೆನಿಮ್ಮ ದಾರಿ ನೀವು ನೋಡ್ಕೊಳ್ಳಿ" ಎಂದನಂತೆ ನಮ್ಮ ಭೂಪತಿ. ಹೀಗೆ ಪುಗಸಟ್ಟೆ ಸಲಹೆಗಳನ್ನು ಕೊಡುವವರು ನಮಗೆ ಬಹಳ ಜನ ಸಿಗುತ್ತಾರೆ. ಏಕೆಂದರೆ ಈ ಜಗತ್ತಿನಲ್ಲಿ ಅತೀ ಸುಲಭವಾದ ಕೆಲಸಗಳೆಂದರೆ 'ಅನ್ಯರಿಗೆ ಸಲಹೆ ನೀಡುವುದು ಮತ್ತು ಮತ್ತೊಬ್ಬರು ಮಾಡಿದ ಕೆಲಸದಲ್ಲಿ ಹುಳುಕ ಹುಡುಕುವುದು' . 

ತೈತ್ತರೀಯೋಪನಿಷತ್ತು ತನ್ನ 'ಶೀಕ್ಷಾವಲ್ಲಿಯಲ್ಲಿ ಕೊಡುವ ವಿಷಯವನ್ನು ಪ್ರಸ್ತಾಪಿಸುತ್ತಾ  'ಭಿಯಾ ದೇಯಂ ಎಂದಿದೆ. ಯಾರಿಗಾದರೂ ಏನನ್ನಾದರೂ ಕೊಡುವಾಗ ಮನಸಿನಲ್ಲಿ 'ಭಯ' ವನ್ನಿಟ್ಟುಕೊಂಡು ಕೊಡು ಎಂದಿದೆ. ಭಯವೇತಕ್ಕೆ ಎಂದರೆನಾವು ಕೊಟ್ಟ ವಸ್ತು, ಸಲಹೆ  ಅಥವಾ ವಿಷಯ ಅವರಿಗೆ ಉಪಯೋಗಕ್ಕೆ ಬರುತ್ತದೋ ಅಥವಾ ಅದರಿಂದ ಅವರಿಗೆ ಏನಾದರೂ ತೊಂದರೆಯಾಗುತ್ತದೆಯೋ ಏನೋ ಎಂಬ 'ಭಯ' ವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕೊಡಬೇಕು ಎನ್ನುತ್ತದೆ. ಹಾಗೆ ನಮ್ಮ ಮನಸ್ಸಿನಲ್ಲಿ ಭಯವಿಟ್ಟುಕೊಂಡರೆಆಗ ನಾವು ಕೊಡುವುದು ಸೂಕ್ತವಾಗಿಉಪಯುಕ್ತವಾಗಿಅನುಕೂಲವಾಗಿರುತ್ತದೆ.  

ಮಾನ್ಯ ಗುಂಡಪ್ಪನವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ 'ಸುಲಭವಲ್ಲೊಳಿತೆಸೆಗೆಎಂದು ಹೇಳಿ ಪರರಿಗುಪಕರಿಸುವುದು ಅಷ್ಟು ಸುಲಭವಲ್ಲಎಂದಿದ್ದಾರೆ. ಅನ್ಯರ ಅವಶ್ಯಕತೆಗಳನ್ನು ಅರಿಯುವುದು ಬಹಳ ಕಷ್ಟ. ಅದು ಏನೋ ಇದ್ದರೆ ನಾವು ಮತ್ತೇನನ್ನೋಊಹಿಸಿಭಾವಿಸಿ ಕೊಟ್ಟಾಗಎಡವಟ್ಟಾಗುತ್ತದೆ. ನಿಷ್ಪ್ರಯೋಜಕ ವಸ್ತು ಅಥವಾ ಸಲಹೆಯನ್ನು ನೀಡಿ ಅನ್ಯರಿಗೆ ಉಪಕರಿಸದೆಹಲಬಾರಿ ತೊಂದರೆಯನ್ನೇ ಮಾಡಿದಂತಾಗುತ್ತದೆ. ನಮ್ಮ ಉದ್ದೇಶ್ಯ 'ಶುದ್ಧ'ವಾಗಿದ್ದರೂಅನ್ಯರಿಗೆ ಬೇಕಾದ ವಸ್ತು ಅಥವಾ ವಿಷಯಬೇಕಾದ ಸಮಯದಲ್ಲಿಬೇಕಾದ ಪ್ರಮಾಣದಲ್ಲಿ ಕೊಡುವುದರಲ್ಲಿ ನಾವು ಸೋಲುತ್ತೇವೆ.  


ಅನ್ಯರಿಗೆ ಉಪಕರಿಸಬೇಕು ಎನ್ನುವ ಭಾವನೆ ಒಳ್ಳೆಯದೇ ಆದರೂ ನಾವು ಮಾಡುವ ಉಪಕಾರ ಸೂಕ್ತವಾಗಿದೆಯೇ ಎಂದು ಆಲೋಚಿಸಿ ನಂತರ ಒದಗುವುದು ಒಳ್ಳೆಯದು. ಉದಾಹರಣೆಗೆ 'ತನ್ನ ಸಮಸ್ಯೆಗಳನ್ನು ತಾನೇ ಪರಿಹರಿಸಲು ಪ್ರಯತ್ನಪಡುತ್ತಿರುವವರಿಗೆ ಒಡನೆಯೇ ಸಹಾಯಮಾಡಲು ಹೋದರೆ, ಅವರ ಪ್ರಯತ್ನ ಮತ್ತು ಅವರ ಸಾಹಸಕ್ಕೆ ಅಡ್ಡಿಯೊಡ್ಡಿ ಅವರ ಕ್ಷಮತೆಯನ್ನು ಕುಂಠಿತಗೊಳಿಸಿದಂತೆಯೇ ಅಲ್ಲವೇ? ಕೈಲಾಗದವರಿಗೆ ಮತ್ತು ದೀನರಿಗೆ ಒದಗುವುದು ಸೂಕ್ತ. ಕ್ಷಮತೆಯಿದ್ದವನಿಗೂ ಒದಗಿದರೆ ಅವನನ್ನು ಸೋಂಬೇರಿಯಾಗಿಸಿದಂತೆಯೇ ಅಲ್ಲವೇ?  

ನಾವು ಮಾಡುವ ಉಪಕಾರ ಸೂಕ್ತವೋ ಅಲ್ಲವೋ ಎಂದು ನಿರ್ಧರಿಸುವುದೇ ಬಹಳ ಕಷ್ಟಕರವಾದ ಕೆಲಸ. ಅನ್ಯರಿಗೆ ಉಪಕಾರ ಮಾಡುವುದು ಸುಲಭವಲ್ಲ. ಉಪಕಾರ ಮಾಡಬೇಕೆಂದು ಶುದ್ಧಮನಸಿದ್ದರೂ ಹಾಗೆ ಮಾಡುವಾಗ ಬಹಳ ಜಾಗರೂಕರಾಗಿರಬೇಕು. ನಾವು ಅನ್ಯರಿಗೆ ಸೂಕ್ತ ಉಪಕಾರ ಮಾಡಲಾಗದಿದ್ದರೆಅವರ ಪಾಡಿಗೆ ಅವರನ್ನುಅವರ ಕರ್ಮಕ್ಕೆ ಅವರನ್ನು ಬಿಟ್ಟುಶುದ್ಧಮನಸ್ಸಿನಿಂದ ಅವರಿಗೆ ಶುಭವಾಗಲೆಂದು ಹಾರೈಸಿದರೆಅವರಿಗೆ ಒಳಿತನ್ನು ಮಾಡಿದಂತೆಯೇ!!!!!!!!!!! 


No comments:

Post a Comment