Saturday 1 December 2018

ದೇವರು-ಪ್ರಗತಿಪರನ ಚಿಂತನೆ





ಋಗ್ವೇದದ ಮಂತ್ರಗಳು ದೇವರ ಕುರಿತಾದ ಸತ್ಯವಾದ ಮತ್ತು ವೈಜ್ಞಾನಿಕವಾದ ಒಂದು ಸಂಕ್ಷಿಪ್ತ ವಿವರಣೆಯನ್ನು ನೀಡುತ್ತದೆ. ವೇದಮಂತ್ರಗಳು ಅನಂತವಾದ ಇಡೀ ಜಗತ್ತನ್ನು ಆವರಿಸಿಕೊಂಡಿರುವ ಒಂದು ಆಧ್ಯಾತ್ಮಿಕ ವಸ್ತುವೇ ' ದೇವರು ' ಎಂದು ಘೋಷಿಸುತ್ತವೆ. ದೇವರು ಸರ್ವ ವ್ಯಾಪಕನಾಗಿರುವನು ಮತ್ತು ಜಗತ್ತಿನ ಪ್ರತಿಯೊಂದು ವಸ್ತುವೂ ದೇವರಲ್ಲಿಯೇ ಇದ್ದು, ದೇವರಿಂದಲೇ ಮಾಡಲ್ಪಟ್ಟಿದೆ. 'ಸರ್ವವ್ಯಾಪಕ ' ಮತ್ತು  'ವ್ಯಾಪ್ತ '  ಎನ್ನುವ  ಪದಗಳು ಇದನ್ನು ಸೂಚಿಸುತ್ತದೆ.    

ಕಪ್ಪು ಹಲಗೆಯ ಮೇಲೆ ಬರೆಯಲುಪಯೋಗಿಸುವ ' ಸೀಮೆ ಸುಣ್ಣ' ಒಂದು ತುಂಡನ್ನು ಒಂದು ನೀರಿರುವ ಲೋಟದಲ್ಲಿ ಹಾಕಿದರೆ, ಸೀಮೆ  ಸುಣ್ಣದ ತುಂಡು ನೀರನ್ನು ಹೀರಿಕೊಳ್ಳುತ್ತದೆ ಮತ್ತು  ಲೋಟದಲ್ಲಿನ ನೀರು   ಸೀಮೆ ಸುಣ್ಣದ ತುಂಡಿನೊಳಕ್ಕೆಲ್ಲಾ ಸೇರಿಕೊಳ್ಳುತ್ತದೆ. ಎಂದರೆ  ಸೀಮೆ ಸುಣ್ಣದ ತುಂಡು ನೀರಿನೊಳಕ್ಕೆ ಇದ್ದು ತುಂಡಿನೊಳಕ್ಕೆ ನೀರು ತುಂಬಿಕೊಂಡಿರುತ್ತದೆ. ಇದೇ ರೀತಿ ಪರಮಾತ್ಮ ಅಥವಾ ಪರತತ್ವವೆನ್ನುವುದು ಲೋಟದ ನೀರಿದ್ದಂತೆ ಮತ್ತು ಜಗತ್ತಿನ ವಸ್ತುಗಳೆಲ್ಲಾ ನೀರಲ್ಲಿ ಬಿದ್ದ ಸೀಮೆ ಸುಣ್ಣದಂತೆ. ಹೇಗೆ ಸೀಮೆ ಸುಣ್ಣ ತಾನು ನೀರೊಳಗೆ ಇದ್ದರೂ ತನ್ನೊಳಕ್ಕೂ ನೀರನ್ನು ತುಂಬಿಕೊಂಡಂತೆ ಜಗತ್ತಿನ ವಸ್ತುಗಳೆಲ್ಲಾ ಪರಮಾತ್ಮನಲ್ಲಿದ್ದರೂ ಅವನನ್ನೇ ಒಳಗೂ ತುಂಬಿಕೊಂಡಿರುತ್ತವೆ. ಎಂದರೆ ಪರಮಾತ್ಮ ನಮ್ಮೊಳಗೂ ಮತ್ತು ನಮ್ಮ ಹೊರಗೂ ಇದ್ದಾನೆ ಎಂದು ಅರ್ಥ.  

ಋಗ್ವೇದ ಮತ್ತು ಅಥರ್ವವೇದಗಳು ' ದೇವರ ' ನ್ನು ಜಗತ್ತನ್ನೆಲ್ಲಾ ಅವರಿಸಿಕೊಂಡಿರುವಂತಹ ಒಂದು ಸೂಕ್ಷ್ಮ ಶಕ್ತಿಯೆಂದು ವಿವರಿಸುತ್ತವೆ. ಅನಂತ ವಿಶ್ವದಲ್ಲಿರುವ ಮೂರು ' ಅಸ್ಥಿತ್ವ ' ಗಳ ಬಗ್ಗೆ ಹೇಳುತ್ತಾಇಲ್ಲಿರುವುದು ಕೇವಲ ) ಆಕಾಶ, ವಾಯು, ಅಗ್ನಿ, ಜಲ ಮತ್ತು ಭೂಮಿ ಎಂಬ  ಪಂಚಭೂತಗಳಿಂದಾದ 'ಜಡ ಅಥವಾ ಸ್ಥೂಲ' ವಸ್ತು, ) ಅಣು ಚೈತನ್ಯ ಸ್ವರೂಪದಲ್ಲಿ ಜಗತ್ತಿನಲ್ಲಿರುವ ಅನಂತ ಆತ್ಮಗಳು ಮತ್ತು ) ನಿತ್ಯವಾದ, ಸತ್ಯವಾದ, ಭೃಹತ್ ಚೈತನ್ಯವಾಗಿ ಸಕಲ ಚರಾಚರಗಳ ಅಸ್ಥಿತ್ವಕ್ಕೆ ಕಾರಣೀಭೂತವಾದ ' ದೇವರು ' ಎಂದು ಕರೆಯಲ್ಪಡುವ ' ಭೃಹತ್ ಚೈತನ್ಯ.  

ಜಡವಸ್ತುವಿಗಿಂತ ' ಆತ್ಮ' ವು ಸೂಕ್ಷ್ಮ. ಆತ್ಮಕ್ಕಿಂತ ಸೂಕ್ಷ್ಮ 'ಪರಮಾತ್ಮ'. ಜಡವಸ್ತುವುಎಲೆಕ್ಟ್ರಾನ್, ಪ್ರೋಟಾನ್, ನ್ಯೂಟ್ರಾನ್ ಮತ್ತು ಪೋಸಿಟ್ರಾನ್ ಎಂಬ ಕಣಗಳಿಂದ ಆಗಮಾಡಲ್ಪಟ್ಟಿದೆ. ಆತ್ಮವು ಜಡವಸ್ತುವಿಗಿಂತ ಸೂಕ್ಷ್ಮವಾದ್ದರಿಂದ ಅದು ತನ್ನ ರೂಪ ಮತ್ತು ಸ್ಥಳವನ್ನು ಬದಲಾಯಿಸಿಕೊಳ್ಳುತ್ತದೆ. ಆದರೆ ದೇವರು ಅಥವಾ ಪರಮಾತ್ಮ, ಜಡ ಮತ್ತು ಆತ್ಮಕ್ಕಿಂತ  ಸೂಕ್ಷ್ಮಾತಿಸೂಕ್ಷ್ಮವಾದ್ದರಿಂದ ಜಡ ಮತ್ತು ಚೇತನಗಳ ಮೇಲೆ ಸಂಪೂರ್ಣ ಸ್ವಾಮಿತ್ವವನ್ನು ಸ್ವಾಭಾವಿಕವಾಗಿಯೇ ಹೊಂದಿರುತ್ತದೆ. ಪರಮಾತ್ಮಅಣುಚೈತನ್ಯಕ್ಕೆ ಒಂದು ದೇಹ ಅಥವಾ ರೂಪ ಅಥವಾ ಕಾಯವನ್ನು ಕೊಟ್ಟು ದೇಹದ ಮೂಲಕ ತನ್ನನ್ನು ತಾನು ಸುಧಾರಿಸಿಕೊಳ್ಳಲು ಮತ್ತು ಜ್ಞಾನಪಡೆಯಲು ಒಂದು ಸೂಕ್ತ ಮಾರ್ಗವನ್ನು ಕಲ್ಪಿಸುತ್ತದೆ. ಹಾಗೆ ಪಡೆದ ಜ್ಞಾನದ ಮೂಲಕ ಆತ್ಮವು ಮುಕ್ತವಾಗುತ್ತದೆ. ಸುಧಾರಣೆಯೆನ್ನುವುದು ಆತ್ಮ ದೇಹಧಾರಣೆಯನ್ನು ಮಾಡಿ, ಜನನ, ಜೀವನ, ವೃದ್ದಾಪ್ಯ ಮತ್ತು ಮರಣಗಳ, ಅವ್ಯಾಹತ ತಿರುಗುತ್ತಿರುವ ಚಕ್ರದಿಂದಲೇ ಪಡೆಯಬೇಕಾಗುತ್ತದೆ.  

ಪರಮಾತ್ಮನನ್ನು ಸಕಾಲಕ್ಕೂ ಒಡೆಯನೆಂದು, ಅನಂತನೆಂದು, ಇಡೀ ವಿಶ್ವವನ್ನೇ ಆವರಿಸಿಕೊಂಡಿರುವವನೆಂದೂ ಅರ್ಥಮಾಡಿಕೊಂಡರೆ, ಜಡ ಮತ್ತು ಜೀವರ ಮೇಲಿನ ಅವನ ಸಾರ್ವಭೌಮತ್ವ  ನಿಚ್ಚಳವಾಗುತ್ತದೆ. ಹಾಗಾದಾಗ ಪರಮಾತ್ಮನನ್ನು, ವೈಜ್ಞಾನಿಕವಾಗಿ ಅರ್ಥಮಾಡಿಳ್ಳುವುದರಿಂದ, ಮೂಢನಂಬಿಕೆಯಿಂದ ಪೂಜಿಸಬೇಕಾದ ಪೂಜೆಯ ವಸ್ತುವೆಂದು ಪರಿಗಣಿಸಬೇಕಾಗಿಲ್ಲ. ಸಂಪ್ರದಾಯಬದ್ಧ ನಂಬಿಕೆ ವೈಜ್ಞಾನಿಕ ವೈಚಾರಿಕತೆಗೆ ಮತ್ತು ಕೌತುಕಕ್ಕೆ ಎಡೆಮಾಡಿಕೊಡುತ್ತದೆ. ಅಂತಹ ಸ್ಥಿತಿಯಲ್ಲಿ ನಮ್ಮ ಮತ್ತು ಪರಮಾತ್ಮನ ನೇರ ಸಂಪರ್ಕವಾಗಿ ನಿಜವಾದ ' ಪೂಜೆ ' ಎಂದೆನಿಸಿಕೊಳ್ಳುವ ಅವನ ಅನಂತ ಕಲ್ಯಾಣಗುಣಗಳ ಮತ್ತು ಅವುಗಳ ಜ್ಞಾನದ ಕಿರಣಗಳು ನಮ್ಮ ಒಳಕ್ಕೆ ನುಗ್ಗುತ್ತವೆ.

ಜೀವಕ್ಕೆ ಅಥವಾ ಆತ್ಮಕ್ಕೆ ಅರ್ಥಮಾಡಿಕೊಳ್ಳುವ ಮತ್ತು ಬುದ್ಧಿವಂತಿಕೆಯ ಜ್ಞಾನ ಒಂದು ಮಿತಿಯಲ್ಲಿರುತ್ತದ್ದೆ, ಎಂದು ವೇದಗಳು ಸಾರುತ್ತವೆ. ಆದರೆ ಪರಮಾತ್ಮನೆಂಬುವನು ಸರ್ವಾಂತರ್ಯಾಮಿಯಾದ್ದರಿಂದ ಅದರ ಜ್ಞಾನಕ್ಕೆ ಮಿತಿಯೇ ಇಲ್ಲ. ದೇಹಗಳನ್ನು ಧಾರಣೆಮಾಡಿದ ಜೀವಗಳು ಆಯಾಯಾ ದೇಹಗಳ ದೈಹಿಕ ಮಿತಿಗಳ ಪರಿಧಿಯಲ್ಲೇ ಜಗತ್ತನ್ನು ಅರ್ಥಮಾಡಿಕೊಳ್ಳಬಲ್ಲ ಮಿತವಾದ ಜ್ಞಾನವನ್ನು ಹೊಂದಿವೆಅಜ್ಞಾನದಿಂದ, ದೇವರ ನಿಜ ಸ್ವರೂಪವನ್ನು ಅರಿಯದೆ ಚಿಹ್ನೆಗಳನ್ನು, ಚಿತ್ರಗಳನ್ನು, ಮೂರ್ತಿಗಳನ್ನು ಮತ್ತು ವಸ್ತುಗಳನ್ನು ದೇವರೆಂದು ಲೋಕದ ಜನರು ಪೂಜಿಸುತ್ತಾರೆ. ಅದೂ ಸಹ ಬೆಳವಣಿಗೆಯ ಒಂದು ಹಂತವೆಂದು ಪರಿಗಣಿಸಿದರೂಇದರಿಂದ ಮೂಲತತ್ವಕ್ಕೆ ದೂರವಾದ ಮತ್ತು ಸತ್ಯಕ್ಕೆ ದೂರವಾದ ಹಲವಾರು ಭಿನ್ನಭಿನ್ನ ಮತಗಳು ಮತ್ತು ಧರ್ಮಗಳು ಹುಟ್ಟಿಕೊಂಡಿವೆ. ಇದೇ ಕಾರಣದಿಂದ ಜಗತ್ತಿನಲ್ಲಿ ಧರ್ಮದ ಹೆಸರಿನಲ್ಲಿ ಇಷ್ಟೊಂದು ಭೇದಗಳು, ಒಳ ಜಗಳಗಳು, ತಿಕ್ಕಾಟಗಳು ಮತ್ತು ಘೋರವಾದ ಯುದ್ಧಗಳು ನಡೆದಿವೆ ಮತ್ತು ನಡೆಯುತ್ತಿವೆ.   

ನಾವು ವೇದಗಳು ಪ್ರತಿಪಾದಿಸಿದ ಸರಳ ಆಧ್ಯಾತ್ಮಿಕ ಸತ್ಯಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಪಟ್ಟರೆ ಜಗತ್ತಿನಲ್ಲಿ ಧರ್ಮದ ವಿಷಯದಲ್ಲಿ ಮತ್ತು ಮತಗಳ ವಿಷಯದಲ್ಲಿ ಏಕೀಭಾವ ಬಂದರೆ  ' ದೇವರು ' ಮತ್ತು ದೈವಕ್ಕೂ ಜಗತ್ತಿಗೂ ಇರುವ ಸಂಬಂಧವನ್ನು ಒಂದು ಸಮಾನ ರೀತಿಯಲ್ಲಿ ಅರ್ಥೈಸುವ ಸಾಧ್ಯತೆ ಖಂಡಿತ ಇದೆ. ಹಾಗಾದಾಗ ಜಗತ್ತಿನಲ್ಲಿ ಶಾಂತಿ, ಸಹಬಾಳ್ವೆ ಮತ್ತು ಸಹಿಷ್ಣುತೆಗಳು ನೆಲೆಗೊಳ್ಳಲು ಸಾಧ್ಯವಾಗುತ್ತದೆ ಮತ್ತು ನಮ್ಮ ಪೃಥ್ವಿ ಎಲ್ಲ ಜೀವಿಗಳಿಗೂ ವಾಸಿಸಲು ಒಂದು ಸುಂದರ ತಾಣವಾಗಿ, ಮಾನವನ ದೈಹಿಕ, ಭೌದ್ಧಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ವಿಕಾಸಕ್ಕೆ ದಾರಿಯಾಗಿ ಮಾನವರನ್ನು ಮುಕ್ತಿಯ ಮಾರ್ಗದಲ್ಲಿ ನಾಡಿಸುವುದರಲ್ಲಿ ಸಂದೇಹವೇ ಇಲ್ಲಅಂತಹ ಸತ್ಯವನ್ನು ಅರಿತುಕೊಳ್ಳುವ ಪ್ರಯತ್ನವನ್ನು ನಾವೆಲ್ಲಾ ಮಾಡಬೇಕು

ರವಿ ತಿರುಮಲೈ 


No comments:

Post a Comment