ಬದುಕ ನೀಡಿದವನೆ ಕೇಳು
ನಿನ್ನ ಜಗವಿಂದು
ಸಾಕಾಗಿದೆ
ನಾ ಜೀವಂತ ಸತ್ತಾಗಿದೇssssss । ಬದುಕ ।
ಇರುಳು ಸರಿಯುವುದಿಲ್ಲ
ಹಗಲು ಹೋಗುವುದಿಲ್ಲ
ನೀನಿತ್ತ ಗಾಯವದು
ಮಾಗುವುದಿಲ್ಲಾ
ಕಣ್ಣು ಸೊರಗಿದೆಯೀಗ
ಮನವು ಮುದುಡಿದೆ ಈಗ
ದುಃಖದಾ ಮಡುವಾಗಿದೆ
ಮೋಡಿಯೊಂದನು
ಮಾಡಿಹೆಯಲ್ಲಾ ।ಬದುಕ ।
ಕಸಿದೆ ನೀ ಎನ್ನ
ಸುಖವನನ್ಯಾಯದಿಂದ
ಜೀವಂತವಿಟ್ಟೆನ್ನ
ಜೀವನವ ಕಸಿದೇssssss
ಹತ್ಯೆಗೈದಿಹೆ ಹೃದಯ
ಮೌನವೆಂತಿಹುದಯ್ಯ
ಹೇಳುವೆ ಕೇಳಯ್ಯಾ
ಎನ್ನ ಸುಖದಿಂದ ನೀ
ಹೆದರಿದೆಯಾ ।ಬದುಕ|
'ಎನ್ನ ಸುಖದಿಂದ ನೀ ಹೆದರಿದೆಯಾ' ಎಂಬ ತಮ್ಮ ನೋವು ತುಂಬಿದ ಉಪ ಸಂಹಾರದಂತೆ, ಈಗ ಈ ವೇದನೆಯು ಸಕಾಲಿಕವಾಗಿದೆ ಮಾನ್ಯರೇ! ಉಕ್ಕಿ ಹರಿದಿದೆ ನೀರು - ಕೊಚ್ಚಿ ಹೋಗಿವೆ ಜನರು ಕಟ್ಟಿಕೊಂಡ ಪುಟ್ಟ ಬದುಕುಗಳು.
ReplyDeleteಭಗವಂತ ಏಕಿಂತ ಆಕ್ರೋಶವು ನಿಮಗೆ? 🙁
ಧನ್ಯವಾದಗಳು ಬದರೀ. ನಿಮ್ಮ ಮನಸ್ಸಿನಲ್ಲಿ ನಾವಿನ್ನೂ ಇದ್ದೀವಲ್ಲ ಎನ್ನುವುದೇ ಒಂದು ಸಂತೋಷದ ವಿಚಾರ
Delete