Saturday 28 March 2015

ಗುಂಡಪ್ಪನವರ ಹಾರೈಕೆ


ನನ್ನ ಹುಟ್ಟುಹಬ್ಬದ ದಿನ ಶ್ರೀ ಮಂಜುನಾಥ್ ಶ್ರೀಕಾಂತ್ ಅವರು ನನಗಾಗಿ, 


ಗುಂಡಪ್ಪನವರನ್ನು ಧರೆಗೆ ಕರೆತಂದು ಅವರ   ಹಾರೈಕೆಯನ್ನು ನನಗೆ ತಂದು 


ಕೊಟ್ಟ ಬಗೆ ಹೀಗೆ ......... ಮುಂದೆ ಓದಿ 


ಅರವತ್ತು ಅರವತ್ತು ಅರವತ್ತು... ವಾಹ್

ಒಂದು ಪ್ರಾಥಮಿಕ ಶಾಲೆ

ಮಾಸ್ತರರು ಹೇಳಿದರು.. "ಮಕ್ಕಳೇ ಇಂದು ಹಾಜರಿ ತೆಗೆದುಕೊಳ್ಳಬೇಕು.. ಎಲ್ಲರೂ ಇಂದು ನಿಮ್ಮ ಹೆಸರಿಗೆ ಬದಲಾಗಿ ನಿಮ್ಮ ನಿಮ್ಮ ಕ್ರಮ ಸಂಖ್ಯೆಯನ್ನು ಹೇಳಿ.. ಆದಷ್ಟು ಜೋರಾಗಿ ಹೇಳಬೇಕು ಆಯಿತೆ"

ಮಕ್ಕಳು ಕೂಡ.. ಮಾಸ್ತರರ ದನಿಯನ್ನೇ ಅನುಕರಿಸಿ ಅವರಿಗಿಂತ ತುಸು ಜೋರಾಗಿಯೇ ತಮ್ಮ ತಮ್ಮ ಕ್ರಮ ಸಂಖೆಯಗಳನ್ನು ಹೇಳುತ್ತಾ ಹೋದರು.

ಹತ್ತಾಯಿತು, ಇಪ್ಪತ್ತಾಯಿತು, ಮೂವತ್ತಾಯಿತು, ನಲವತ್ತು ಸಾಲಿನ ಸಂಖ್ಯೆಗಳು ಧಾಟಿ ಐವತ್ತರ ಸಾಲಿಗೆ ಬಂದವು..

"ಐವತ್ತು, ಐವತ್ತೊಂದು, ಐವತ್ತೆರಡು, ಐವತ್ತಮೂರು, ಐವತ್ತನಾಲ್ಕು, ಐವತ್ತೈದು, ಐವತ್ತಾರು, ಐವತ್ತೇಳು, ಐವತ್ತೆಂಟು, ಐವತ್ತೊಂಭತ್ತು... "

ಮಕ್ಕಳು ಮೇಲ್ಚಾವಣಿ ಕಿತ್ತು ಹೋಗುವಂತೆ ಜೋರಾಗಿ ಹೇಳುತ್ತಿದ್ದರು..


ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು,
ಗುರುಗಳು "ಐವತ್ತೊಂಭತ್ತು ಅಂಕೆಯನ್ನು ಐವತ್ತೊಂಭತ್ತು ಬಾರಿ ಹೇಳಾಯಿತು.. ಮುಂದಕ್ಕೆ ಹೇಳ್ರೋ.. ."

ಮಕ್ಕಳು ಸುಮ್ಮನೆ ಗುರುಗಳನ್ನು ನೋಡುತ್ತಾ ಕೂತರು.. ತರಗತಿಯಲ್ಲಿ ಐವತ್ತೊಂಭತ್ತು ವಿಧ್ಯಾರ್ಥಿಗಳು ತಮ್ಮ ಹಾಜರಿ ಕೊಟ್ಟಿದ್ದರು.. .. ಯಾಕೋ ಲೆಕ್ಕ ತಪ್ಪಿತೆ ಎಂದು ಅನುಮಾನಗೊಂಡ ಗುರುಗಳು.. ಕಣ್ಣಲ್ಲೇ ಒಟ್ಟು ವಿಧ್ಯಾರ್ಥಿಗಳ  ಲೆಕ್ಕವನ್ನು ಹಾಕತೊಡಗಿದರು.. ಅರೆ ಹೌದು ನನ್ನ ತರಗತಿಯಲ್ಲಿ ಅರವತ್ತು ವಿಧ್ಯಾರ್ಥಿಗಳು ಇರುವುದು..

ಇದೇನು ಅರವತ್ತನೇ ಹುಡುಗ ಎಲ್ಲಿ.. ಕಣ್ಣಲ್ಲೇ ಹುಡುಕಿದರೂ.. ಕಾಣಲಿಲ್ಲ, ಒಂದು ಕ್ಷಣ ಕಣ್ಣು ಮುಚ್ಚಿ ಕೂತರು..

"ಗ್ರೀಸಿನಾ ಕಬ್ಬಗಳನೋದುವರು ದೆಹಲಿಯಲಿ
ಕಾಶಿಯಾ ಶಾಸ್ತ್ರಗಳನಾಕ್ಸಫರ್ಡಿನವರು |
ದೇಶಕಾಲವಿಭಾಗ ಮನದ ರಾಜ್ಯದೊಳಿರದು
ಶ್ವಾಸವದು ಬೊಮ್ಮನದು – ಮಂಕುತಿಮ್ಮ. ||"

ಜೋರಾಗಿ ಈ ಕಗ್ಗದ ಪದಗಳು ತರಗತಿಯ ಕೊಠಡಿಯ ಬಾಗಿಲಿನ ಬಳಿ ಯಾರೋ ಓದುತ್ತ ಬಂದದ್ದು ಕೇಳಿಸಿತು..

ಗುರುಗಳಿಗೆ ತಕ್ಷಣ ಅರಿವಾಯಿತು.. ಅರೆ ಇದು ನನ್ನದೇ ಮುಕ್ತಕ.. ಅದು ಅರವತ್ತನೆಯದು.. ಸರಿಯಾಗಿದೆ..

ಗುರುಗಳು "ಬಾ ಬಾರೋ ರವಿ.. ಇದು ಅರವತ್ತನೆಯ ಮುಕ್ತಕ.. ಏನಪ್ಪಾ ಇದು ಓದುತ್ತಾ ಬರುತ್ತಿದ್ದೀಯ.. ಏನು ಸಮಾಚಾರ" ರವಿ ಹೇಳುತ್ತಾರೆ.. " ಏನಿಲ್ಲ ಗುರುಗಳೇ.. ಇಂದು ಈ ಕಗ್ಗ ತುಂಬಾ ನೆನಪಿಗೆ ಬಂತು ಅದಕ್ಕೆ ಓದುತ್ತಾ ಬಂದೆ.. ನನಗೆ ಅರಿವಿಲ್ಲದೆ ಓದುತ್ತಾ ಓದುತ್ತಾ.. ಶಾಲೆಯೊಳಗೆ ಕಾಲಿಟ್ಟೆ.. ಅರವತ್ತು ಗುರುಗಳೇ.. ಇದು ನನ್ನ ಹಾಜರಿ" ಎಂದನು ಆ ಪುಟ್ಟ ಹುಡುಗ..

ಗುರುಗಳು ಸಂತಸಭರಿತ ತಲೆ ಸವರುತ್ತಾ "ರವಿ ಪುಟ್ಟಾ.. ನನಗೆ ಅರಿವಿದೆ.. ನೀನು ಭೂಮಿಗೆ ಬಂದು ಅರವತ್ತು ವಸಂತಗಳು ಆಯಿತು.. ಹಾಗೆಯೇ ಈ ಮುಕ್ತಕ ಕೂಡ ಅರವತ್ತನೆಯದು.. ಎಷ್ಟು ಹೊಂದಾಣಿಕೆ ಇದೆ... ನೀನು ನನ್ನ ಮುಕ್ತಕಗಳನ್ನು ನಿನ್ನ ಧಾಟಿಯಲ್ಲಿ ಬರೆಯುತ್ತಿರುವ ಸಂಖ್ಯೆ ನಿನ್ನೆಗೆ ೭೯೯ ಆಗಿದೆ.. ಇನ್ನು ಕೆಲವೇ ಮಾಸಗಳಲ್ಲಿ ನಿನ್ನ ಶೈಲಿಯಲ್ಲಿ ಸಕಲರಿಗೂ ಅರಿವಾಗುವ ಹಾಗೆ ವಿವರಿಸುತ್ತಿರುವ ನನ್ನ ಎಲ್ಲಾ ಮುಕ್ತಕಗಳಿಗೂ ವಿವರಣೆ ಸಿಕ್ಕಿಯೇ ಬಿಡುತ್ತದೆ. ನನಗೆ ಬಲು ಸಂತಸವಾಗುತ್ತಿದೆ. ಇಷ್ಟವಾದುದ್ದನ್ನು, ಕಷ್ಟವಾದುದ್ದನ್ನು, ಮುಕ್ತವಾಗಿದ್ದನ್ನು ಎಲ್ಲರಿಗೂ ತಿಳಿಸುತ್ತಿರುವ ರೀತಿ ನನಗೆ ಬಲು ಇಷ್ಟಮಯ"

ಪುಟಾಣಿ ರವಿ ಕಣ್ಣಲ್ಲೇ ಆನಂದ ಭಾಷ್ಪ.. ಗುರುಗಳ ಹೊಗಳಿಕೆಯನ್ನು, ಬೆನ್ನು ತಟ್ಟುವಿಕೆಯನ್ನು ಅನುಭವಿಸುತ್ತಿರುವ ಅವರ ಮನಸ್ಸು ಭಲೇ ರವಿ ಭಲೇ ಎಂದು ಹೇಳುತ್ತಿತ್ತು.

ಗುರುಗಳು ಮಾತನ್ನು ಮುಂದುವರೆಸಿದರು.. "ರವಿ.. ನೀನು ಇಷ್ಟು ಸಾಧಿಸಿದ್ದರು ನೀನು ಏನು ಸಾಧಿಸಿಲ್ಲ ಎನ್ನುವ ನಿನ್ನ ತಾತ್ವಿಕ ಗುಣ.. ಹಾಗೂ ಸಾಧಿಸಬೇಕಾದ್ದು ಬೇಕಾದಷ್ಟು ಇದೆ ಎನ್ನುವ ನಿನ್ನ ನಮ್ರ ಗುಣವೆ ನಿನ್ನನ್ನು ಪ್ರಾಥಮಿಕ ಶಾಲೆಯಲ್ಲಿ ನನ್ನ ವಿಧ್ಯಾರ್ಥಿಯನ್ನಾಗಿ ಮಾಡಿದೆ.. ಆದರೆ ಇಂದು ಜಗತ್ತಿಗೆ ಹೇಳುತ್ತಿರುವೆ.. ನಿನ್ನದು ಗಜ ಗಾತ್ರದ ಸಾಧನೆ.. ಆದರೆ ನಿನ್ನ ನಮ್ರ ಮನಸ್ಸಿಗೆ ಕಾಣುವುದು ಗುಲಗಂಜಿಯಷ್ಟೇ ಸಾಧನೆ ಎಂದು.. ಅದಕ್ಕೆ ನಿನ್ನನ್ನು ಎಲ್ಲರೂ ಇಷ್ಟಪಡುವುದು.. ನಿನ್ನ ಸ್ನೇಹ ಮಂಡಲ ಸೌರ ಮಂಡಲದಷ್ಟೇ ಪ್ರಕಾಶಮಾನ.. "

ನಿನ್ನ ಅರವತ್ತು ವರ್ಷಗಳ ವಸಂತಮಾಸವನ್ನು ಒಮ್ಮೆ ಇಣುಕಿ ನೋಡಿದಾಗ ನಿನ್ನ ಸಾಧನೆ ಕಂಡು ನಿನ್ನ ಗುರುವಾದ ನನಗೆ ಹೆಮ್ಮೆ ಎನಿಸುತ್ತದೆ.. ಹೌದು ಇಂದು ನೀನು ನನ್ನ ತರಗತಿಯಲ್ಲಿ ಹಾಜರಿ ಹೇಳದೆ ನನ್ನ ಅರವತ್ತನೇ ಮುಕ್ತಕ ಓದುತ್ತಾ ಬಂದಾಗ ನನಗೆ ಆದ ಸಂತಸ ಹೇಳ ತೀರದು.

ರವಿ ನಿನಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಈ ರೀತಿಯಲ್ಲಿ ಹೇಳುತ್ತಿದ್ದೇನೆ.. ಹಾಗೂ ಆಶಿರ್ವದಿಸುತ್ತಿದ್ದೇನೆ.. ನಿನ್ನ ಅರವತ್ತು ವಸಂತಗಳ ಸಾರ್ಥಕ ಜೀವನ ಇನ್ನಷ್ಟು ಪ್ರಜ್ವಲಿಸಲಿ.. ಹೀಗೆ ಯಶಸ್ಸಿನ ಜೀವನ ಮುನ್ನುಗ್ಗಲಿ, ಶತಕದ ಸಾಧನೆ ನಿನ್ನದಾಗಲಿ.

ಕಂದಾ ನಿನಗೆ ಹುಟ್ಟು ಹಬ್ಬದ   ಶುಭಾಶಯಗಳು.. ನನ್ನ ತರಗತಿಯಲ್ಲಿನ ಎಲ್ಲ ವಿಧ್ಯಾರ್ಥಿಗಳಲ್ಲಿ ನೀನು ನನ್ನ ಪ್ರೀತಿಯ ವಿಧೇಯ ವಿಧ್ಯಾರ್ಥಿಗಳಲ್ಲಿ ನೀನು ಮೊದಲ ಸಂಖೆಯಲ್ಲಿ ನಿಲ್ಲುವವನು..

ರವಿ ಪುಟಾಣಿಯ ಕಣ್ಣಲ್ಲಿ ಜೋಗದ ಜಲಧಾರೆ.. ಸಾಕ್ಷಾತ್ ಕಗ್ಗ ಪಿತಾಮಹರೆ ಬಂದು ನನ್ನ ಅರವತ್ತನೇ ವಸಂತಕ್ಕೆ ಶುಭ ಹಾರೈಸಿದ್ದಾರೆ. ಇದಕ್ಕಿಂತ ನನಗೆ ಇನ್ನೇನು ಬೇಕು.. ಕೈಯಲ್ಲಿ ಹಿಡಿದ್ದಿದ ಕಗ್ಗ ಪುಸ್ತಕ ಹಾಗೆ ಜೋಡಿಯಾಗಿ ಆ ಮಹಾನ್ ಕಗ್ಗ ಗುರುಗಳಿಗೆ ನಮಸ್ಕರಿಸುತ್ತಾ ಧನ್ಯೋಸ್ಮಿ ಎಂದಿತು ಆ ಪುಟಾಣಿಯ ಮನಸ್ಸು.

*****

ರವಿ ಗುರುಗಳೇ.. ನಿಮ್ಮ ಜನುಮದಿನಕ್ಕೆ ಶುಭ ಕೋರಬೇಕು ಎಂದು ಹಂಬಲಿಸಿದಾಗ.. ಇಂದು ಯುಗಾದಿ ಹಬ್ಬ.ಹಬ್ಬದ ಸಂಭ್ರಮದಲ್ಲಿ.. ಮನೆ ಮನದಲ್ಲಿ ಇರುವ ಕುಟುಂಬದ ಸದಸ್ಯರೊಡನೆ ಸೇರಿ ನಲಿಯುತ್ತ ಇದ್ದಾಗ.. ದಿನ ಹೇಗೆ ಕಳೆಯಿತು ಎಂದು ಅರಿವಾಗಲೇ ಇಲ್ಲ.. ರಾತ್ರಿ ಮಲಗುವ ಮುನ್ನ ನಿಮಗೆ ಶುಭ ಹಾರೈಸಲೇ ಬೇಕು ಎಂಬ ಹಠ ತೊಟ್ಟು ಬರೆಯಲು ಕೂತಾಗ ಕೆಲವೇ ಕ್ಷಣಗಳಲ್ಲಿ ಈ ಲೇಖನವನ್ನು ನನ್ನ ಮನದೊಳಗೆ ಕೂತು ಬರೆಸಿದ್ದು ನಿಮ್ಮ ಸ್ನೇಹ ಪರ ಮನಸ್ಸು ಹಾಗೂ ಡಿವಿಜಿ ಅಜ್ಜನ ಆಶೀರ್ವಾದ. ಅಜ್ಜನ ಬಾಯಿಂದಲೇ ನಿಮಗೆ ಶುಭಾಶಯಗಳನ್ನು ಹೇಳಿಸಬೇಕು ಎಂಬ ಪಣ ತೊಟ್ಟ ನನ್ನ ಕೀಲಿಮಣೆ .. ನಿಮ್ಮ ಹೆಸರನ್ನು ಹೇಳುವಾಗ ಏಕ ವಚನದಲ್ಲಿ ಬರೆಸಿಯೇ ಬಿಟ್ಟಿತು.. ಬೇರೆ ದಾರಿಯಿಲ್ಲದೆ ಹಾಗೆ ಮಾಡಬೇಕಾಯಿತು. ಕ್ಷಮೆ ಇರಲಿ..
ಕಗ್ಗಗಳ ಪಿತಾಮಹರ ಆಶಿರ್ವಾದದ ನೆರಳಲ್ಲಿ ರವಿ ತಿರುಮಲೈ ಗುರುಗಳು -
(ಚಿತ್ರ ಕೃಪೆ ರವಿ ಸರ್ ಅವರ ಟೈಮ್ ಲೈನ್ )

ನಿಮ್ಮ ಪ್ರತಿದಿನದ ನುಡಿಮುತ್ತುಗಳು, ಕಗ್ಗ ರಸಧಾರೆ, ಜೊತೆಯಲ್ಲಿ ನೀವು ನನ್ನ ಮಾತಾಡಿಸುವಾಗ "ರಾಜ" ಎನ್ನುವ ಆ ಸ್ನೇಹ ಪರ ಧ್ವನಿ ನನಗೆ ಬಲು ಇಷ್ಟ.

ಮತ್ತೊಮ್ಮೆ ನನ್ನ ಸಕಲ ಸ್ನೇಹಲೋಕದ ಸದಸ್ಯರ ಪರವಾಗಿ ಷಷ್ಠಿ ಸಂಭ್ರಮಕ್ಕೆ ಶುಭಾಶಯಗಳು. 

No comments:

Post a Comment