ಏನು ಮಾಡಿದರೇನು
ಭವ ಬೀಜವ ಸುಡದೆ
ಭಾವದಲಿ ಬಂದರೇನು
ಬದುಕಿನಲಿ ಬರದೆ
ಹೊತ್ತು ತಂದದ್ದಷ್ಟು
ಗಳಿಸಿಕೊಂಡದ್ದಷ್ಟು
ಗುಣಿಸಿ ಭಾಗಿಸಿ ಕಡೆಗೆ
ಉಳಿಸಿಕೊಂಡದ್ದಷ್ಟು
ಭವ ಬೀಜವ ಸುಡದೆ
ಭಾವದಲಿ ಬಂದರೇನು
ಬದುಕಿನಲಿ ಬರದೆ
ಹೊತ್ತು ತಂದದ್ದಷ್ಟು
ಗಳಿಸಿಕೊಂಡದ್ದಷ್ಟು
ಗುಣಿಸಿ ಭಾಗಿಸಿ ಕಡೆಗೆ
ಉಳಿಸಿಕೊಂಡದ್ದಷ್ಟು
ಕೋಪತಾಪದ ಮೂಲ
ಕರ್ಮಶೇಷದಾ ಜಾಲ
ಸರ್ಪದೊಲು ಸುತ್ತಿಹುದು
ಧೀ,ಮನಗಳನು ಮುತ್ತಿಹುದು
ಕಡೆಯವರೆಗೂ ಬಿಡದು
ಧರಣಿಯ ಸೊಗಡು
ಅಂತ್ಯದಾಚೆಗೂ ಬಂದು
ಮತ್ತೆ ಚಿಗುರಲಿಹುದು
ಧರಣಿಯ ಸೊಗಡು
ಅಂತ್ಯದಾಚೆಗೂ ಬಂದು
ಮತ್ತೆ ಚಿಗುರಲಿಹುದು
ಸುಡಬೇಕು ಗುಣವನ್ನು
ಚಿಗುರುವಾ ಕಣವನ್ನು
ಗುಣರಾಹಿತ್ಯವೇ ಪರಮಾರ್ಥ
ನಿರ್ಗುಣವೇ ಸುಗುಣ
ರವಿ ತಿರುಮಲೈ
೧೭.೦೩.೨೦೧೫
ನನ್ನಂತ ಅಲ್ಪಮತಿಗಳಿಗೂ ಅರಿವಾಗುವ ಮಟ್ಟಿಗೆ ಮನೋ ಶುದ್ಧೀಕರಣ ಔಷಧ ರೂಪದ ಕವನ.
ReplyDeleteನಿರ್ಗುಣವೇ ಸುಗುಣ, ಎಂಬುದು ಪರಿಪಕ್ವತೆಯ ನಿಜ ಸಂಕೇತ.
ಪದ ಲಾಲಿತ್ಯ ಮತ್ತು ಸರಳತೆಯೇ ಮೈವೆತ್ತಂತಹ ಕವನ.
This comment has been removed by the author.
ReplyDelete