ಸುಟ್ಟುಬಿಡು ಭಗವಂತ
ಚಟ್ಟಕೇರುವ ಮುನ್ನ
ಶೇಷರಹಿತವಾಗಿ
ವಿಷಯಾಸಕ್ತಿಗಳನ್ನ
ಬಿಡಿಸಿಬಿಡು ಭಗವಂತ
ಅಡಿಗಡಿಗೆ ತೊಡರುವ
ಭವಬಂಧದ ಲತೆಗಳ
ಲವಲೇಶವಿರದಂತೆ
ಕೊಟ್ಟುಬಿಡು ಭಗವಂತ
ನೆಟ್ಟಗೆ ನಿನ್ನನರಿಯಲೆನಗೆ
ಸೊಟ್ಟ ನಡಿಗೆಯ ತೊರೆದು
ದಿಟ್ಟ ನಡಿಗೆಯ ದಾರಿ
ಜನ್ಮದಂತ್ಯಕೆ ಬಂದು ನೀನೇ ನೆಲೆಸು
ಹೃನ್ಮನಗಳಲಿ ನೀನೇ ಚಲಿಸು
ನಾನೆಂಬುವ ಅಹಮನಳಿಸಿ
'ನೀನೇ' ಎಂಬ ಭಾವವ ನಿಲಿಸು.
ಚಟ್ಟಕೇರುವ ಮುನ್ನ ಓ ಭಗವಂತ, ಚಟ್ಟಕೇರುವ ಮುನ್ನ................
ಕಗ್ಗದ ಸತ್ತ್ವ ಮತ್ತು ತತ್ತ್ವಗಳು ನಿಮ್ಮೊಳಗಿಳಿದಿವೆ. ಅರ್ಥಪೂರ್ಣ ಕವಿತೆ
ReplyDeleteಮನಸ್ಸಿದ್ದಂತೆ ಕಾವ್ಯವೂ ಹುಟ್ಟಿಸುವ ಕವಿಗಳು ಅಪರೂಪ.
ReplyDeleteಅಹಂನು ಮುರಿದು ನಾನು ಎಂಬುದು ನೀನಾಗುವಂತಾಗುವ ಅಸಲೀ ಗುರಿಯತ್ತ ಮನವು ತುಡಿಯಲಾರಂಭಿಸಿತೆಂದರೆ ಅದು ಮನೋ ಪಕ್ವದ ಮೊದಲ ಹೆಜ್ಜೆ.
Wow thumba adbuta salugalu
ReplyDelete