ನಿನ್ನ ಮೌನವೆನಗೆ ಕಂಡಿತಂದು
ಕೇವಲ ನಿನ್ನ ಬಲಹೀನತೆಯೆಂದು
ಕೋಪಗೊಂಡು ಅರಚಿದೆ
ಕ್ರೋಧದಿಂದ ಕ್ಷುದ್ರನಾಗಿ ಕನಲಿದೆ
ಕೇವಲ ನಿನ್ನ ಬಲಹೀನತೆಯೆಂದು
ಕೋಪಗೊಂಡು ಅರಚಿದೆ
ಕ್ರೋಧದಿಂದ ಕ್ಷುದ್ರನಾಗಿ ಕನಲಿದೆ
ಪದಗಳನಾಡಿದೆ,ವಾದಗಳ ಮಂಡಿಸಿದೆ
ಮಾತುಗಳ ಕತ್ತಿಯಲಗಿನಂತೆ ಬಳಸಿದೆ
ಎನ್ನ ಮತವೆಂದೆಂದಿಗೂ ಸರಿಯೆಂದು
ನೀ ಸರಿಯಾಗಲು ಸಾಧ್ಯವಿಲ್ಲೆಂದು
ಮಾತುಗಳ ಕತ್ತಿಯಲಗಿನಂತೆ ಬಳಸಿದೆ
ಎನ್ನ ಮತವೆಂದೆಂದಿಗೂ ಸರಿಯೆಂದು
ನೀ ಸರಿಯಾಗಲು ಸಾಧ್ಯವಿಲ್ಲೆಂದು
ಅಂದಿನಿಂದ ಇಂದಿನವರೆಗೆ, ನಾ
ಆಡಿದ ಮಾತಿನಾ ಭಾರದಲಿ, ನಾ
ಕುಗ್ಗಿಹೆ, ಬಗ್ಗಿಹೆ, ಕುಬ್ಜನಾಗಿಹೆ, ಅರಿತು
ಎನ್ನ ನುಡಿಗಳು ಕಿವಿಗೆ ಇಂಪಾದ ಹಾಡಲ್ಲವೆಂದು
ಆಡಿದ ಮಾತಿನಾ ಭಾರದಲಿ, ನಾ
ಕುಗ್ಗಿಹೆ, ಬಗ್ಗಿಹೆ, ಕುಬ್ಜನಾಗಿಹೆ, ಅರಿತು
ಎನ್ನ ನುಡಿಗಳು ಕಿವಿಗೆ ಇಂಪಾದ ಹಾಡಲ್ಲವೆಂದು
ಬಳಲಿ ಬೆಂಡಾಗಿ, ಎನ್ನ ಅಹಮಡಗಿ,
ಒರಗಲೊಂದು ಆಸರೆಯೊಂದ
ಹುಡುಕುತ್ತಿರೆ, ಕಳೆದ ದಿನಗಳ
ನೆನೆದು,ಒರಗಿ ಕಣ್ಣೀರಿಡಲೆಂದು
ಒರಗಲೊಂದು ಆಸರೆಯೊಂದ
ಹುಡುಕುತ್ತಿರೆ, ಕಳೆದ ದಿನಗಳ
ನೆನೆದು,ಒರಗಿ ಕಣ್ಣೀರಿಡಲೆಂದು
ನೀ ತೆರೆದ ತೋಳ್ಗಳಿಂದ, ಬಾ
ಎಂದು ಕರೆದಾಗ, ನಾ ಕುಸಿದು
ಧರೆಗಿಳಿದು ಮೌನದಲಿ ಕೂಗಿದೆ,
ಕ್ಷಮಯಾ ಧರಿತ್ರಿ ಕ್ಷಮಯಾ ಧರಿತ್ರಿ
ಎಂದು ಕರೆದಾಗ, ನಾ ಕುಸಿದು
ಧರೆಗಿಳಿದು ಮೌನದಲಿ ಕೂಗಿದೆ,
ಕ್ಷಮಯಾ ಧರಿತ್ರಿ ಕ್ಷಮಯಾ ಧರಿತ್ರಿ
ರವಿ ತಿರುಮಲೈ
ಎನ್ನ ಸಾವಿರ ತಪ್ಪುಗಳ ಬಾರ ಹೊತ್ತವಳೇ
ReplyDeleteಎನ್ನ ಮನದೆನ್ನೇ...
ಯಾಕೋ ಈಗಲೇ ಮನೆಗೆ ಹೋಗಿ ನನ್ನವಳ ಮುಂದೆ
ಮಂಡಿಯೂರಿ ಕುಳಿತು,
’ಧರೆಗಿಳಿದು ಮೌನದಲಿ ಕೂಗಿ ಬಯಸಿಹೆನು
ಕ್ಷಮಯಾ ಧರಿತ್ರಿ ಕ್ಷಮಯಾ ಧರಿತ್ರಿ’
shared at:
https://www.facebook.com/groups/191375717613653?view=permalink&id=435285689889320