ನಾನೊಂದು ಆದಿ
ನಾನೊಂದು ಅಂತ್ಯ
ನಾನೇ ಜಗತ್ತು
ನಾನೇ ಶೂನ್ಯ
ನಾನೊಂದು ಕಡಲ ಜಲದ ಹನಿ
ಆದ್ಯಂತರಹಿತ ಕಡಲೇ ನಾನು
ಏಕಾಂತ ನನ್ನ ಮಿತಿ
ಒಂದು ಕ್ಷಣಕ್ಕೆ ನಾ ಸ್ಥಬ್ಧ
ನನಗಾಗಿ ನನ್ನದೇ ವ್ಯರ್ಥ ಹುಡುಕಾಟ
ನಾನಿಲ್ಲ ನಾನಿರುವೆಗಳ ನಡುವೆ
ಕಣ್ಣ ಮುಚ್ಚಾಲೆಯಾಟ
ಮೂಲೆಮೂಲೆಯಲ್ಲೂ ನನ್ನನ್ನೇ
ತುಂಬಿಕೊಳ್ಳಲು ಪರದಾಟ
ಅಸ್ಪಷ್ಟ ನೀತಿ ನಿಯಮಗಳ ನಡುವೆ
ನನ್ನ ಯೋಚನೆಗಳು ಜೀರ್ಣವಾಗದೆ
ನಿರಂತರ ಪ್ರಶ್ನೆಗಳ ಸುರಿಮಳೆ
ನಿರುತ್ತರದ ಸ್ಥಿತಿಯಲ್ಲಿ ತಲೆಬಾಗುವೆ
ನಾನಾ ಪರವಸ್ತುವಿಗೆ
ಎನ್ನ ಪದಗಳಿಂದ ನಾನಮರ
ಗೋರಿಗಳಿಂದೆದ್ದು ಕೂಗುವ
ಎನ್ನ ಪೂರ್ವಜರ ಕರೆಗಳಿಂದ,
ಬರೆಯುವುದೆನ್ನ ಹಕ್ಕು, ಧರ್ಮ
ಅಣಕವಾಡುವವರು, ಅಣಕಿಸಲಿ
ಹೊಗಳುವವರ ಗುಣಗಾನವಿರಲಿ
ವಿದ್ವಜ್ಜನರೊಪ್ಪಿಕೊಳ್ಳಲಿ, ಸೂರ್ಯನ
ಕಡೆ ಮುಖಮಾಡಿ ನಾಯಿ ಬೊಗುಳಲಿ
ನಾನೊಂದು ಆದಿ ನಾನೊಂದು ಅಂತ್ಯ
ನಾನೊಂದು ಅಂತ್ಯ
ನಾನೇ ಜಗತ್ತು
ನಾನೇ ಶೂನ್ಯ
ನಾನೊಂದು ಕಡಲ ಜಲದ ಹನಿ
ಆದ್ಯಂತರಹಿತ ಕಡಲೇ ನಾನು
ಏಕಾಂತ ನನ್ನ ಮಿತಿ
ಒಂದು ಕ್ಷಣಕ್ಕೆ ನಾ ಸ್ಥಬ್ಧ
ನನಗಾಗಿ ನನ್ನದೇ ವ್ಯರ್ಥ ಹುಡುಕಾಟ
ನಾನಿಲ್ಲ ನಾನಿರುವೆಗಳ ನಡುವೆ
ಕಣ್ಣ ಮುಚ್ಚಾಲೆಯಾಟ
ಮೂಲೆಮೂಲೆಯಲ್ಲೂ ನನ್ನನ್ನೇ
ತುಂಬಿಕೊಳ್ಳಲು ಪರದಾಟ
ಅಸ್ಪಷ್ಟ ನೀತಿ ನಿಯಮಗಳ ನಡುವೆ
ನನ್ನ ಯೋಚನೆಗಳು ಜೀರ್ಣವಾಗದೆ
ನಿರಂತರ ಪ್ರಶ್ನೆಗಳ ಸುರಿಮಳೆ
ನಿರುತ್ತರದ ಸ್ಥಿತಿಯಲ್ಲಿ ತಲೆಬಾಗುವೆ
ನಾನಾ ಪರವಸ್ತುವಿಗೆ
ಎನ್ನ ಪದಗಳಿಂದ ನಾನಮರ
ಗೋರಿಗಳಿಂದೆದ್ದು ಕೂಗುವ
ಎನ್ನ ಪೂರ್ವಜರ ಕರೆಗಳಿಂದ,
ಬರೆಯುವುದೆನ್ನ ಹಕ್ಕು, ಧರ್ಮ
ಅಣಕವಾಡುವವರು, ಅಣಕಿಸಲಿ
ಹೊಗಳುವವರ ಗುಣಗಾನವಿರಲಿ
ವಿದ್ವಜ್ಜನರೊಪ್ಪಿಕೊಳ್ಳಲಿ, ಸೂರ್ಯನ
ಕಡೆ ಮುಖಮಾಡಿ ನಾಯಿ ಬೊಗುಳಲಿ
ನಾನೊಂದು ಆದಿ ನಾನೊಂದು ಅಂತ್ಯ
ರವಿ ತಿರುಮಲೈ
೧. ೧೧. ೨೦೧೪
ಸಾಹಿತಿಯ ನಿಜವಾದ ಸ್ವಗತ ಗೀತೆ ಇದು.
ReplyDeleteತನ್ನ ಬರವಣಿಗೆಯನು ಗುರುತಿಸಿದರೆ ಜಗವು ತನಗದರೆ ಆನಂದ. ಚಪ್ಪಾಳೆ ಇರದೆ ಅದೆಂತು ಹುರುಪು ಗಾಯಕನಿಗೂ ಅಲ್ಲವೇ ಮತ್ತೆ!