Saturday 14 July 2012

ಮೃತ್ಯು ಭಯ - ನಿವಾರಣೆ.

ನಮಗೆ ಗೊತ್ತಿಲ್ಲದ ವಿಷಯ ಮತ್ತು ಅದರಿಂದಾಗಬಹುದಾದ ಪರಿಣಾಮಗಳಿಂದನಾವು ಭಯ ಪಡುವುದು ಸಹಜ. ಈ ಗುಂಪಿಗೆ ಮೃತ್ಯು ಅಥವಾ ಸಾವಿನಭಯವೂ ಸೇರುತ್ತದೆ. ಈ ಭಯಕ್ಕೆ ಕಾರಣಸಾಯುವಾಗ ಏನಾಗುತ್ತದೆ ಎಂಬುದು ನಮಗೆ ಗೊತ್ತಿಲ್ಲದಿರುವುದು. ಅಂತ್ಯಕಾಲದ ಖಾಯಿಲೆಗಳು ಮತ್ತು ಅವುಗಳ ನೋವುಸಾವಿನಂಚಿನಲ್ಲಿರುವಾಗ ನಮ್ಮ ಆಪ್ತೇಷ್ಟರು ನಮ್ಮನ್ನು ಬಿಟ್ಟುಹೋಗಬಹುದಾದಂತಹ ಭಯ,  ಸಾವಿನ೦ಚಿನಲ್ಲಿರುವ  ಮನುಷ್ಯನ ಮನೆಯಲ್ಲಿ ಸುತ್ತ ಮುತ್ತಲಿನ ಜನದ ಶೋಕ ಭಾವಆ ವ್ಯಕ್ತಿಯನ್ನು ನೋಡುತ್ತಿರುವ ವೈದ್ಯರ ಮತ್ತು ದಾದಿಯರ ಅಸಹಾಯಕತೆಹೀಗೆ ಹತ್ತು ಹಲವಾರು ರೀತಿಯ ಭಯಗಳು ನಮ್ಮನ್ನು ಮುತ್ತಿಕೊಳ್ಳ ಬಹುದುಆದರೆ ಅನಾರೋಗ್ಯ ಪೂರಿತವಾದ ದೇಹದಿಂದವಾಸಿಯಾಗದ ಖಾಯಿಲೆಯಿಂದ ನರಳುತ್ತಿರುವ ದೇಹದಿಂದ ವ್ಯಕ್ತಿಗೆ ಮುಕ್ತಿ ಮಾತ್ರ ಸಾವಿನಿಂದಲೇ ಎಂದರೆ ತಪ್ಪಾಗಲಾರದಲ್ಲವೇ?

ಮರಣ  ನಮಗೆ ಶತ್ರುವಲ್ಲಜೀವನದಲ್ಲಿ ಅದು ಸಹಜನಮ್ಮ ಅಸ್ತಿತ್ವದ ಒಂದು ಮಜಲು ಮತ್ತು ನಮ್ಮಲ್ಲಿರುವ "ಸತ್"  ವಸ್ತುವು  ಒಂದು ಮಜಲಿಂದ ಇನ್ನೊಂದಕ್ಕೆ  ಬದಲಾಗುವ ಪ್ರಕ್ರಿಯೆ. ಪ್ರತಿ ಶಿಶಿರದಲ್ಲೂ ಗಿಡ ಮರಗಳು ತಮ್ಮ ಎಲೆಗಳನ್ನು ಹೇಗೆ ಉದುರಿಸುತ್ತವೆ. ನಮಗೆ ಅದು ಅಸಹಜವೆನ್ನಿಸುವುದಿಲ್ಲ.  ಹಾಗೆಯೇ ಮೃತ್ಯುವೂ ಸಹ  ಪ್ರಕೃತಿಯ ಸಹಜ ಪ್ರಕ್ರಿಯೆ. ಪ್ರತಿ ರೋಗಿಯೂ ಸತ್ತಾಗಅವರನ್ನು ನೋಡಿಕೊಂಡ ವೈದ್ಯರಾಗಲೀದಾದಿಯರಾಗಲೀ ತಾವು ಆ ವ್ಯಕ್ತಿಯನ್ನು ಬದುಕಿಸಲಾಗಲಿಲ್ಲವೇ ಎಂದು ನೊಂದುಕೊಳ್ಳಬಾರದು. ವಾಸ್ತವವಾಗಿಅನಾರೋಗ್ಯದಿಂದ ಒದ್ದಾಡುತ್ತಿರುವ ಆ ದೇಹದಲ್ಲಿ  ಆ ವ್ಯಕ್ತಿಯನ್ನು ಬದುಕಿಸಲು ಸಾಹಸ ಮಾಡಿ ಆ ವ್ಯಕ್ತಿಯನ್ನು ಮತ್ತಷ್ಟು ದಿನ ಶಿಥಿಲವಾದ ಆ ದೇಹದಲ್ಲಿ ಇರಲು ಒತ್ತಾಯಿಸುವುದಕ್ಕಿಂತಶಾಂತಿಯಿಂದ ಆ ದೇಹವನ್ನು ತೊರೆಯಲು ಬಿಡುವುದೇ ತುಂಬಾ ಸೂಕ್ತ ಅಥವಾ ಸಾವಿನೊಂದಿಗೆ ಹೋರಾಡಿ ಅದನ್ನು ಗೆಲ್ಲುವ ಪ್ರಯತ್ನಕ್ಕಿಂತ ಅದರೊಂದಿಗೆ ಶಾಂತಿಯುತ ಸಂಧಾನ ಮಾಡಿಕೊಳ್ಳುವುದೇ ಉತ್ತಮ.

ಸಾವಿನ ಕ್ಷಣಗಳು ಬಹಳ ನೋವಿನಿಂದ ಅಥವಾ ಕ್ಲೀಷೆಯಿಂದ ಕೂಡಿದ್ದಾಗಿರಬಹುದು. ಆದರೆ ಅದು ತಾತ್ಕಾಲಿಕ. ಆ ಸಮಯದಲ್ಲಿ ಸಾವಿನ ನಂತರ ಹೇಗೆ ಉತ್ತಮಗತಿಯನ್ನು ಪಡೆಯಬಹುದು ಎಂಬ ವಿಚಾರದಲ್ಲಿ ಮಗ್ನರಾಗುವುದು ಲೇಸು.   ನಮ್ಮ ಮನೆಬಂಧು ಬಾಂಧವರುಮತ್ತು ನಾವು ಅಂಟಿಕೊಂಡಿರುವ ಎಲ್ಲದನ್ನೂ ಬಿಟ್ಟು ಹೋಗುವುದು  ಕಷ್ಟವೇ. ಆದರೆ ನಾವು ಈಗಿರುವುದಕ್ಕಿಂತ ಉತ್ತಮವಾದ ಸ್ತಿತಿಗೆ ಹೋಗುವುದಾದರೆ ಏಕೆ ಶೋಕಮತ್ತಷ್ಟು ಉತ್ತಮ ಸ್ಥಿತಿಗೆ ಹೋಗುವುದು ಸಂತೋಷದ ವಿಷಯ ತಾನೇಈ ರೀತಿಯ ಸಂತೋಷ ಸಾವಿನ ಸಂಧರ್ಭದ ನೋವನ್ನು ಸ್ವಲ್ಪವಾದರೂ ಕಡಿಮೆ ಮಾಡೀತು. 

ಆದರೆ ಮೃತ್ಯುವಿನ ಭಯಕ್ಕೆ ಮೂಲ ಕಾರಣವೇನೆಂದರೆನಂತರ ಎಲ್ಲಿಗೆ ಹೋಗುತ್ತೇವೆ ಅಥವಾ ಹೇಗೆ ಇರುತ್ತೇವೆ ಎಂಬುದರ ಅರಿವಿಲ್ಲದೆ ಇರುವುದು. ಹಾಗೆ ಮೃತ್ಯುವಿನ ನಂತರ ಏನಾಗುತ್ತೇವೆ ಅಥವಾ ಎಲ್ಲಿಗೆ ಹೋಗುತ್ತೇವೆ ಎಂದು ತಿಳಿಯದ್ದಿದ್ದರೆಸುಮ್ಮನೆ ವಿಧಿಗೋ ಅಥವಾ ನೀವು ನಂಬಿದ ದೇವರಿಗೋ ಶರಣಾಗುವುದೇ ಲೇಸು. ಏಕೆಂದರೆಹಾಗೆ ಮಾಡಿದಾಗ ಅದು ನಮ್ಮನ್ನು ಇನ್ನಷ್ಟು ಅರಿವು ಮೂಡಿಸುವಲ್ಲಿಗೆ ತೆಗೆದುಕೊಂಡು ಹೋಗಿ ಹಾಕುತ್ತದೆ. ಇಡೀ ಸೃಷ್ಟಿಯೇ ಕರುಣೆಯಿಂದ ಕೂಡಿದೆ. ನಾವು ಈ ಪ್ರಪಂಚದಲ್ಲಿರುವುದು ನಮಗೆ ಸಿಕ್ಕ ಶಿಕ್ಷೆಯೇನಲ್ಲ. ಇಹದ ಅನುಭವ ಮತ್ತು ಇಂದ್ರಿಯ ಸುಖದ ಆಸೆಯೇ ನಮ್ಮನ್ನು ಇಲ್ಲಿಗೆ ತಂದು ಹಾಕಿದೆ. ನಾವು ಯಾರು ಮತ್ತು ನಮ್ಮ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳಲು ಪ್ರತಿ ಜನ್ಮವೂ ಅವಕಾಶಮಾಡಿಕೊಡುತ್ತದೆ. ಮೃತ್ಯು ಎಂದರೆ ಮಾತ್ರ ವಯಸ್ಸಾಗುವುದುಖಾಯಿಲೆಯಿಂದ ನರಳುವುದು ಮತ್ತು ಸಾಯುವುದಷ್ಟೇ ಅಲ್ಲ. ಪ್ರತಿ ಬಾರಿ ಹುಟ್ಟು ಸಾವಿನ ಚಕ್ರದಲ್ಲಿ ಸುಳಿದಾಗಲೆಲ್ಲಾ ಜೀವನ ಎನಾದೊರೊಂದು ಕಲಿಸಿಯೇ ಕಲಿಸುತ್ತದೆ. ಪ್ರತಿ ಜನ್ಮವೂ  ಪಾಠಶಾಲೆಯ ಒಂದು ತರಗತಿ ಇದ್ದಂತೆ. ಕೆಲವು ಪಾಠಗಳನ್ನು ಕಲಿತು ಅಭ್ಯಾಸಮಾಡಿ ಪರೀಕ್ಷೆಗೆ ಕುಳಿತಂತೆ. ಪ್ರಯತ್ನಪೂರ್ವಕವಾಗಿ ಕಲಿಯಬಹುದು ಅಥವಾ ಹಠಮಾಡಿ ಕಲಿಯದೇ ಇರಬಹುದು. ಒಂದು ವಿಷಯವನ್ನು ಕಲಿಯಲು ಮತ್ತೆ ಮತ್ತೆ ಪ್ರಯತ್ನ ಮಾಡ ಬಹುದು. ಅನುತ್ತೀರ್ಣರಾದರೆ ಚಿಂತೆಯಿಲ್ಲ. ಮತ್ತೊಂದು ಬಾರಿ ಕಲಿಯಲು ಅವಕಾಶವುಂಟು. ಹಾಗಾಗಿ ಸಾವಿನ ಭಯವನ್ನು ಬಿಟ್ಟುವಿಧಿಗೋ ಆ ದೇವರಿಗೋ ಶರಣಾಗಿ ನಾವು ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾಗುವಂತ ಮಜಲನ್ನು ಮುಟ್ಟಲು ಪ್ರಯತ್ನ ಪಡಬೇಕು. 

ದೇವರಲ್ಲಿ ನಂಬಿಕೆ ನಮ್ಮನ್ನು ಕಷ್ಟಗಳಿಂದ ಪಾರು ಮಾಡುತ್ತದೆ. ಆ ನಂಬಿಕೆ ನಿಮಗೆ ನೀವು ಬಯಸಿದ್ದನ್ನು ಪಡೆಯುವ ಸಾಮರ್ಥ್ಯವನ್ನು ನೀಡುತ್ತದೆ. ನೀವು ಬಯಿಸ್ದ್ದಕ್ಕಿಂತ ಅಧಿಕವಾಗೆ ನಿಮಗೆ ಪ್ರಾಪ್ತವಾಗಬಹುದು.  ಅದೇನೆಂದು ಅರಿಯಲು ಮುಕ್ತ ಮನಸ್ಸಿನಿಂದ ಯೋಚಿಸಬೇಕು. ಅಷ್ಟೇ ಅಲ್ಲ ನಾವು ನಮ್ಮ ದೇಹಗಳನ್ನು ಬಿಡುವ ಸಮಯ ಹತ್ತಿರಾದಂತೆಲ್ಲ ಹೆಚ್ಚು ತಿಳುವಳಿಕೆ ಬರಬಹುದು ಮತ್ತ ಅದು ನಮಗೆ ನಮ್ಮ ಸತ್ಯವಾದ ಅಧ್ಯಾತ್ಮಿಕ ಸ್ವರೂಪವನ್ನು ಅವಲೋಕನ ಮಾಡಿಕೊಳ್ಳುವಲ್ಲಿ ಸಹಾಯವಾಗಬಹುದು. ಹಾಗಾಗಿ ಯಾವ ಅಪೇಕ್ಷೆಯನ್ನೂ ಇಟ್ಟುಕೊಳ್ಳದೆಆ ಪರಮಾತ್ಮನಿಗೆ ಸಮರ್ಪಿಸಿಕೊಂಡು ಅವನು ತೋರುವ ದಾರಿಗಾಗಿ ಕಾಯುವುದೇ ಲೇಸು . 

ವಾಸ್ತವಿಕವಾಗಿ ಪ್ರತಿಯೊಬ್ಬನೂ ಬದುಕನ್ನು ಹೇಗೆ ಅರ್ಥಮಾಡಿಕೊಂಡಿದ್ದಾನೆ ಎಂಬುದನ್ನು ಈ ಮರಣದ ಭಯ ಹೊರಹಾಕುತ್ತದೆ. ಇದು ದೈಹಿಕ ಗುರುತಿನ ಆಚೆ ತನ್ನನ್ನು ತಾನು ಅರಿತಿಕೊಳ್ಳಲು ಸಹಾಯಮಾಡುತ್ತದೆ. ನಾವು ಈ ದೇಹಕ್ಕೆ ಎಷ್ಟು ಅಂಟಿಕೊಂಡಿದ್ದೇವೆ ಅಂದರೆನಮಗೆ ಅಂತಹ ಅರಿವೂ ಬೇಡವೆಂದೆನಿಸುತ್ತದೆ. ಹಾಗಾಗಿ ಒಬ್ಬ ಮನುಷ್ಯ ತನ್ನ ದೈಹಿಕ ಅಸ್ತಿತ್ವದ ಹೊರಗೆ ನೋಡಲಾಗದಿದ್ದರೆಈ ದೇಹವನ್ನು ಕಳೆದುಕೊಳ್ಳುವುದು ಅವನನ್ನು ಅತೀವ ಭಯಕ್ಕೆ ತಳ್ಳಬಹುದು. ಆದರೂ ಹುಟ್ಟಿನಿಂದ ಈ ಜಗತ್ತಿಗೆ ಬಂದು ಮರಣದೊಂದಿಗೆ ಈ ಜಗತ್ತನ್ನು ಬಿದಲೆಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ಇದ್ದೂ ಸಹ ತಾನು ಕೇವಲ ಈ ದೇಹವೆಂದು ಹೇಗೆ ಅಂದುಕೊಂಡು ಕುಳಿತುಕೊಳ್ಳಲು ಸಾಧ್ಯ. ನಮ್ಮೆಲ್ಲ ಸ್ವತ್ತುಗಳೂಸಂಬಂಧಗಳೂನಮ್ಮ ನೈಪುನ್ಯತೆಗಳೂ ಸಹ ಎಲ್ಲ ಕೇವಲ ತಾತ್ಕಾಲಿಕ. ಹಾಗಿದ್ದಮೇಲೆ ಈ ದೇಹ ಹೇಗೆ ಶಾಶ್ವತವಾಗಲು  ಸಾಧ್ಯಹಳೆಯ ಅಂಗಿಯನ್ನು ತೆಗೆದು ಬಿಸಾಡಬೇಕಾದರೆ ಭಯವಾಗುತ್ತದೆಯೇ ಇಲ್ಲ ಸಂತೋಷವಾಗುತ್ತದೆಏಕೆಂದರೆ ಹೊಸ ಅಂಗಿ ಬರುತ್ತದೆ ಎಂದು ಮತ್ತ ಹಳೆಯ ಅಂಗಿಯನ್ನು ಮತ್ತೆ ತೊಡಬೇಕಾದ ಅವಶ್ಯಕತೆ ಇಲ್ಲ ಎಂದು. ಹಾಗೆಯೇ ಈ ದೇಹವನ್ನು ಮರನಾವಸ್ತೆಯಲ್ಲಿ ಬಿಡಲು ಭಯವೇಕೆ?
   
ಈ ವಿಷಯದಲ್ಲಿ ಎಲ್ಲ ಭಯ ಮತ್ತು ಭಯದಿಂದ ಉಂಟಾದ ಕ್ಲೇಷೆಗೆಮನಸ್ಸೇ ಕಾರಣ. ಮನಸ್ಸು ತನ್ನ ಅಪೇಕ್ಷಗಳ ಸುಳಿಯಲ್ಲಿ ಹೇಗೆ ಸಿಕ್ಕಿಹಾಕಿಕೊಂಡಿದೆ ಎಂದು ತೋರಲು ಭಯವು ಕೊಟ್ಟ ಕೊಡುಗೆಯೇಈ  ಭಯ ಮತ್ತು ಕ್ಲೇಷೆ. ಮನಸ್ಸು ತನ್ನ ನಿಜ ಸ್ವರೂಪವನ್ನೂ ಮತ್ತು ಅದು ವಸ್ತುಗಳನ್ನು ಹೇಗೆ ಭಾವಿಸುತ್ತದೆ ಎಂಬುದನ್ನು ತೋರುತ್ತದೆ. ವಿಷಯ ವಸ್ತುಗಳು ನಾವು ಬಯಸಿದಂತೆ ಆಗದಿದ್ದರೆ ಅಥವಾ ಇರದಿದ್ದರೆಮನಸ್ಸು ಅದನ್ನು ಒಪ್ಪಿಕೊಳ್ಳದೆಕಷ್ಟಪಡುತ್ತದೆ ಮತ್ತು ನಮ್ಮನ್ನು ಕ್ಲೇಷೆಯಲ್ಲಿ ಮುಳುಗಿಸುತ್ತದೆ. ತತ್ಕಾರಣ ನಾವು ಕೋಪಸಂದೇಹ ಗೊಳ್ಳುತ್ತೇವೆ ಅಥವಾ ಕೋಪಕ್ಕೆ ಬಲಿಯಾಗುತ್ತೇವೆ. ಇವುಗಳಿಂದ ಮುಕ್ತರಾಗಬೇಕಾದರೆ ನಾವು ನಮ್ಮ ಬಂಧನಗಳುಅಹಂಕಾರ ಮತ್ತು ಬಯಕೆಗಳ ಎಲ್ಲೆಯನ್ನು ಮೀರಿ ಬೆಳೆಯಬೇಕು. ಹೀಗೆ ಮರಣವನ್ನು ಅಪ್ಪುವಂತಹ ಪ್ರಜ್ಞೆ ನಮ್ಮಲ್ಲಿ ಈ ತಾತ್ಕಾಲಿಕ ಪ್ರಪಂಚದ ಬಂಧನಗಳನ್ನು  ಮೀರಿ ಬೆಳೆಯುವ ಮತ್ತು ಬೇರೆ ಬೇರೆ ದೇಹಗಳಲ್ಲಿ ವಿವಿಧ ಸ್ಥರದ  ಪ್ರಜ್ಞಾವಷೆಯಲ್ಲಿ ಹಾದುಹೋಗುವ ಸಾಮರ್ಥ್ಯವನ್ನು ಬೆಳೆಸುತ್ತದೆ.
ನಾವೆಲ್ಲಾ ನಶ್ವರರು. ಹಾಗಾಗಿ ನಾವು ಮರಣಕ್ಕೆ ಹೆದರಲೇ ಬೇಕಾಗಿಲ್ಲ. ನಮ್ಮ ಸುತ್ತೆಲ್ಲ ಇರುವ ನಶ್ವರತೆ ನಮಗೆ ಕಾಣುತ್ತದೆ ಅಲ್ಲವೇಪ್ರತೀ ಚಳಿಗಾಲದಲ್ಲೂ ಗಿಡ ಮರಗಳು ಬೋಳಾಗುವಹೊದೆ ಹುಲ್ಲುಗಳು ಒಣಗಿಹೊಗುವುದನ್ನು ನಾವು ನೋಡಿದ್ದೇವೆ. ಮತ್ತೆ ವಸಂತ ಋತುವಿನಲ್ಲಿ ಅವೆಲ್ಲ ಮತ್ತೆ ಚಿಗುರಿ ಹೂ ಕಾಯಿ ಹಣ್ಣುಗಳೊಡನೆ   ನಳನಳಿಸುವುದನ್ನು ನಾವು ನೋಡಿಲ್ಲವೇ?.ಒಂದು ಮರ ಸಂಪೂರ್ಣ ಕಡಿಯಲ್ಪಟ್ಟುಮಣ್ಣಲ್ಲಿ ಮಣ್ಣಾದರೂಅದರ ಪಳೆಯುಳಿಕೆಗಳಿಂದ ಮತ್ತೆ ಚಿಗುರೊಡೆದುಸಸಿಯಾಗಿ ಗಿಡವಾಗಿ ಮರವಾಗುವುದನ್ನು ನಾವು ನೋಡಿಲ್ಲವೇ?  ಒಂದು ಕೊಳದ ನೀರು ಸಂಪೂರ್ಣ ಬತ್ತಿದರೂ ಅದರ ತೊರೆಗಳಲ್ಲಿರುವ ನೀರು ಬಿಸಿಲಿಗೆ ಕಾದು ಆವಿಯಾಗಿ ಮೋಡಗಳಾಗಿ ಮತ್ತೆ ಮಳೆಗೆರೆದು ಮತ್ತೆ ಕೊಳ ತುಂಬುವುದಿಲ್ಲವೇ.?  ಆ ಚೇತನವು ಬೇರೆ ಬೇರೆ ರೂಪಗಳನ್ನು ಧರಿಸುತ್ತಾ ಆ ರೂಪಗಳನ್ನು ಬದಲಾಯಿಸುವುದನ್ನು ನಾವು ಪ್ರತಿ ನಿತ್ಯ ನೋಡುವುದಿಲ್ಲವೇ.?

ಶ್ರೀಮದ್ ಭಗವದ್ಗೀತೆಯಲ್ಲಿ ( ೨-೧೨) ಶ್ರೀ ಕೃಷ್ಣ " ನಾನಿಲ್ಲದ ಸಮಯವಿಲ್ಲನೀನಿಲ್ಲದ ಸಮಯವಿಲ್ಲ ಮತ್ತು ನಾವು ಇಲ್ಲಾದ ಸಮಯವೂ ಮುಂದೆಂದೂ ಇರುವುದಿಲ್ಲ." ಎಂದು ಅರ್ಜುನನಿಗೆ ಹೇಳುತ್ತಾನೆ. ಹಾಗೆಯೇ ಮುಂದುವರೆದು " ಆತ್ಮವು ಯಾವುದೇ ಆಯುಧದಿಂದ ಕತ್ತರಿಸಲ್ಪಡುವುದಿಲ್ಲಬೆಂಕಿಯಿಂದ ಸುಡಲ್ಪಡುವುದಿಲ್ಲ  ಗಾಳಿಯಿಂದ ತೇವಗೊಲಿಸಲಾಗುವುದಿಲ್ಲ. ಒಂದು ಆತ್ಮವು ಮುರಿಯಲಾರದ್ದುಕರಗಲಾರದ್ದುಸುದಲೂ ಆಗದ್ದು ಮತ್ತು ಒಣಗಿಸಲೂ ಆಗದ್ದು. ಆತ್ಮ ನಿರಂತರಸರ್ವವ್ಯಾಪಿಬದಲಾಗದ್ದುಮತ್ತು ಶಾಶ್ವತವಾಗಿ ಇರತಕ್ಕದ್ದು. ಆತ್ಮ ಅಗೋಚರಅಮೇಯಮತ್ತು ಬದಲಾಯಿಸಲಾಗದ್ದು. ಇದನ್ನು ತಿಳಿದೂ ನೀನು ಈ ದೇಹಕ್ಕಾಗಿ ಶೋಕಿಸಬಾರದು. " ( ಭ. ಗೀ. ೨.೨೩-೨೫). ಹೀಗೆ ಆತ್ಮವುಈ ಲೌಕಿಕ ಪ್ರಪಂಚದಲ್ಲಿ ತನ್ನ ಅನುಭವಕ್ಕಾಗಿ ತನಗೆ ಬೇಕಾದ ದೇಹಗಳನ್ನು ಧಾರಣೆ ಮಾಡುತ್ತದೆ. ಆದರೆ ಅದನ್ನು ಕೊಲ್ಲಲ್ಲೂ ಸಾಧ್ಯವಿಲ್ಲ ಮತ್ತು ಅದಕ್ಕೆ ಸಾವೇ ಇಲ್ಲ. ಆದರೆ ತನ್ನು ಉಪಯೋಗಕ್ಕಿಲ್ಲದ ದೇಹಗಳನ್ನು ತೊರೆದು ಹೋಗುತ್ತಿರುತ್ತದೆ ಮತ್ತು ಹೊಸ ಹೊಸ ದೇಹಗಳನ್ನು ಧರಿಸುತ್ತಿರುತ್ತದೆ.

ನಾವು ಈ ವಾಸ್ತವಿಕ ಜೀವನದಲ್ಲಿ ಬದುಕುವಾಗ,  ಮರಣವು ನಮಗೆ ಬಿಡುಗಡೆ ನೀಡುತ್ತದೆ ಸಂಚಿತ ಬಂಧನಗಳಿಂದನಾವು ಅಲಂಕರಿಸಿದ  ಪದವಿಗಳಿಂದ ಮತ್ತು ನಮ್ಮ ಆಸೆ ಅಪೇಕ್ಷೆಗಳಿಂದ ಮುಕ್ತಿ ನೀಡುತ್ತದೆ. ಮರಣವು ತತ್ಯ ಎಂಬುದುನಮಗೆ ನಾವಾರೆಂದು ಅರಿಯಲು ತೊಡಕಾಗುವ ಎಲ್ಲ ವಿಷಯಗಳ ಸೂಕ್ತ ಪರಿಚಯವನ್ನು ಮಾಡಿಕೊಡುತ್ತ್ತದೆ. ವಾಸ್ತವಿಕ ಬದುಕಿನ ಅನುಭವಗಳನ್ನು ಪಡೆಯಲೆಂದೇ ಈ ಜಗತ್ತಿನಲ್ಲಿ ಜನ್ಮಪಡೆದ ನಾವುಇದರ ಅನುಭವ ಪಡೆಯುವಾಗ ಇದರಲ್ಲೇ ಸಿಕ್ಕು ಹಾಕಿಕೊಂಡರೆನಾವು ನಮ್ಮ ಅಧ್ಯಾತ್ಮಿಕ ವ್ಯಕ್ತಿತ್ವವನ್ನು ಮರೆತೇ ಹೋಗುವ ಸಂಭವವಿದೆ. ಈ ರೀತಿ ಮರಣ ನಮಗೆ ಈ ಮಾಯೆಯೊಂದಿಗೆ ಸಂಪರ್ಕವನ್ನು ಕಲ್ಪಿಸುತ್ತದೆ ಮತ್ತು ಅದನ್ನು ಬಿಡುವುದು ಹೇಗೆ ಎಂದೂ ಸಹ ಅರಿವಾಗಿಸುತ್ತದೆ.

ದುರದುಷ್ಟವಶಾತ್ಯಾರಾದರೂ ಅವನ ದೇಹಅಂತಸ್ತುಆಸ್ತಿ ಸಂಬಂಧಗಳು ಮುಂತಾದವುಗಳಿಗೆ ಅತಿಯಾಗಿ ಅಂಟಿ ಕೊಂಡಿದ್ದರೆ  ಆಗ ಮರಣವು ಅತೀ ಅಸಹನೀಯವಾಗುತ್ತದೆ ಮತ್ತು ಅದೊಂದು ಶಿಕ್ಷೆಯಂತೆ ತೋರುತ್ತದೆ. ಆದರೂ ನಮಗೆ ಅದು ಒಂದು ಬಹುಮಾನವೋ ಅಥವಾ ಉಡುಗೊರೆಯಂತೆಯೇ ಅಲ್ಲವೇಎಂದು ನಮಗೆ ನಾವು 'ಆತ್ಮಮತ್ತು ಆತ್ಮಕ್ಕೆ ಮರಣವಿಲ್ಲ ಎಂದು ಸಂಪೂರ್ಣವಾಗಿ ಅರಿವಾಗುತ್ತದೋ ಅಂದು ನಮಗೆ ನಮ್ಮ ದೇಹ ನಾಶವಾದರೂ ನಾವು ಶಾಶ್ವತ ಎಂದು ಅರಿವಾಗುತ್ತದೆ ಮತ್ತು ಭಯ ದೂರವಾಗಿ ಶಾಂತ ರೀತಿಯಲ್ಲಿ ಮರಣದೆಡೆಗೆ ನಡೆಯಬಹುದು.ಅಂತಹ ಅರಿವು ಬಂದಾಗ ಮರಣವೆಂಬುದೆ ಇಲ್ಲಇಂದೊಂದು ಉನ್ನತ ಸ್ಥರಕ್ಕೆ ಏರುವ ಮತ್ತೊಂದು ಮಜಲಷ್ಟೇಎಂದು ಅರಿವಾಗುತ್ತದೆ. ಪಾಠಶಾಲೆಯ ಒಂದು ತರಗತಿಯನ್ನು ತೊರೆದು ಉನ್ನತ ತರಗತಿಗೆ ಹೋಗುವ ಹಾಗೆ. ಪರಮಾತ್ಮನಲ್ಲಿ ಹೆಚ್ಚು ನಂಬಿಕೆ ಮತ್ತು ಅವನ ಮೇಲೆ ಹೆಚ್ಚು ಹೆಚ್ಚು ಅಧಾರಪಡುವಿಕೆಗಳಿಂದ ನಾವು ಈ ಪ್ರಯಾಣವನ್ನು ಸುಲಲಿತವಾಗಿ ಮಾಡಬಹುದು.

ಎಲ್ಲವನ್ನೂ ಕಳೆದುಕೊಳ್ಳುವ ಅಥವಾ ತಾನು  ಆರ್ಜಿಸಿದನ್ನೆಲ್ಲ ಇಲ್ಲೇ ಬಿಟ್ಟು ಹೋಗಬೇಕಲ್ಲ ಎಂದು ಕೊರಗುವವನಿಗೆ " ಸಾವು" ಮೂಳೆ ಮುರಿತದ ಹಿಡಿತವಿದ್ದಹಾಗೆ ಮತ್ತು ದೈವಕ್ಕೆ ಬಲವಂತವಾಗಿ ಶರಣಾದ ಹಾಗೆ. ಆದರೆ ಎಲ್ಲವನ್ನೂ ತೊರೆದು   ತ್ಯಕ್ತ ಭಾವವಿದ್ದವನಿಗೆಆಧ್ಯಾತ್ಮಿಕವಾಗಿ ಮುನ್ನಡೆದವಗೆ, " ಸಾವು" ಆ ಪರಮಾತ್ಮ ಬಂದು ಪ್ರೀತಿಯಿಂದ ಕೈಹಿಡಿದು ಮನೆಗೆ ಕರೆದುಕೊಂಡು ಹೋಗುವ ತಾಯಿಯಂತೆ. ಬೀದಿಯಲ್ಲಿ ಆಟವಾಡುವ ಮಗುವನ್ನು ತಾಯಿ ಬಂದು ಕೈ ಹಿಡಿದು ಮನೆಗೆ ಕರೆದುಕೊಂಡು ಹೋಗುವುದಿಲ್ಲವೇ ಹಾಗೆ. ಪರಮಾತ್ಮ ಸಾಮೀಪ್ಯವನ್ನು ಪಡೆಯಲು ಮರಣ ಒಂದು ಸಾಧನವಾಗುತ್ತದೆ. ತಮ್ಮ ಅಸ್ತಿತ್ವದ ಅರ್ಥ ಇಡೀ ಸೃಷ್ಟಿಯ ಅರ್ಥ ಮತ್ತು ಅಧ್ಯಾತ್ಮಿಕವಾದ ಜ್ಞಾನ ಪಡೆದಾಗ " ಸಾವೆನದರೇನೆಂದು ಅರ್ಥವಾಗುತ್ತದೆ. 

ನಮ್ಮ ಜೀವನವು ಅಸ್ತಿತ್ವಕ್ಕೆ ಬಂದಿರುವುದೇ ದೇಹ ಮನಸ್ಸು ಭುದ್ಧಿ  ಮತ್ತು ಆತ್ಮಗಳ ಸಮ್ಮಿಲನದಿಂದ. ಪೂರ್ವಕರ್ಮಾನುರೂಪದಿಂದ ಆತ್ಮವು ಒಂದು ದೇಹವನ್ನು ಆರಿಸಿಕೊಂಡು ಅದರಲ್ಲಿ ಪ್ರವೇಶಮಾಡಿಮನಸ್ಸು ಬುದ್ಧಿಗಳ ಸಂಸರ್ಗದಲ್ಲಿದ್ದು ತನ್ನ ಕರ್ಮ ಪೂರೈಸಿಕೊಳ್ಳುತ್ತದೆ.   ಎಂದು ಆ ದೇಹ ಇನ್ನು ತನಗೆ ವಾಸಕ್ಕೆ ಸೂಕ್ತವಲ್ಲ ಎಂದು ಆತ್ಮಕ್ಕೆ ಅನಿಸುತ್ತದೋ ಅಂದು ದೇಹವನ್ನು ತೊರೆದು ಮತ್ತೊಂದು ದೇಹವನ್ನು ಅರಸುತ್ತಾ ಹೋಗುತ್ತದೆ. ಸರ್ವ ಸ್ವತಂತ್ರವಾದ ಆತ್ಮ ತನ್ನ ಇಚ್ಚೆಗೆ ಅನುಸಾರವಾಗಿ ದೇಹ ಧಾರಣೆ ಮಾಡುತ್ತದೆ. ನಾವು ಎಲ್ಲಿಯತನಕ " ನಾನು " ಎಂದೇ " ಈ ದೇಹ" ಎಂದು ಅಂದುಕೊಳ್ಳುತ್ತೇವೆಯೋ ಅಲ್ಲಿಯ ತನಕ ನಮಗೆ ಈ ಮೃತ್ಯು ಭಯ ತಪ್ಪಿದಲ್ಲ. ಈ ಭಯದಿಂದ ಮುಕ್ತರಾಗಬೇಕಾದರೆನಾವು ದೇಹ ಮನಸ್ಸು ಬುದ್ಧಿ ಮತ್ತು ಆತ್ಮಗಳ ಪರಸ್ಪರ ಸಂಬಂಧದ ಸೂಕ್ಷ್ಮತೆಯನ್ನು ಅರಿತುಕೊಳ್ಳಬೇಕು. ಆ ಅರಿವು ಮೂಡಿದಾಗ, " ನಾನು ಆತ್ಮ" ಎಂಬ ಅರಿವು ಮನದಲ್ಲಿ ದೃಢವಾದಾಗಮೃತ್ಯುವಿನ ಭಯ ತಾನೇ ತಾನಾಗಿ ಓಡಿ ಹೋಗುವುದು.  ಪ್ರತಿ ಮಾನವನೂ ಇಂತಹ ಅರಿವನ್ನು ತಂದುಕೊಳ್ಳಲು ಪ್ರಯತ್ನಪಡಬಹುದು.

ಸರ್ವೇ ಜನಾಃ ಸುಜನಾ ಭವಂತು
ಸರ್ವೇ ಸುಜನಾಃ ಸುಖಿನಃ ಸಂತು

ರವಿ ತಿರುಮಲೈ
೧೪.೭.೨೦೧೨

1 comment:

  1. ಮರಣ ಭಯದ ಬಗ್ಗೆ ಒಳ್ಳೆಯ ವಿಶ್ಲೇಷಕ ಪ್ರಬಂಧ ಬರೆದುಕೊಟ್ಟಿದ್ದೀರಿ.

    ನಾವು ಸತ್ತಾಗ ಕನಿಷ್ಟ ಐದು ಜನರಾದರೂ ಸಂಪಾದಿಸಬೇಕು ಮತ್ತು ಕನಿಷ್ಠ ನಮ್ಮ ಚಿತೆಗೆ ಖರ್ಚಾಗುವ ಕಟ್ಟಿಗೆಗೆ ತಗಲುವ ವ್ಯಚ್ಚವಾದರೂ ದುಡಿದಿಟ್ಟಿರಬೇಕು ಎನ್ನುವ ಮಾತು ನೆನಪಿಗೆ ಬಂತು.

    ReplyDelete